Advertisement
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಇವತ್ತಿನ ಮುಹೂರ್ತ ಬರೆದಿಟ್ಟುಕೊಳ್ಳಿ ಬಿಜೆಪಿಯವರಿಗೆ ಜೆಡಿಎಸ್ ನಂಬರ್ 1 ಬರುತ್ತದೆ ಎನ್ನುವುದು ಗೊತ್ತಾಗಿದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗೋದು ಗೊತ್ತಾಗಿದೆ. ರಮೇಶ್ ಕುಮಾರ್ ಭಾರೀ ಸಿದ್ದಾಂತ ಮಾತಾನಾಡುತ್ತಾರೆ. ಇದೇ ಡಿಕೆ ಶಿವಕುಮಾರ್ ಕಾಂಗ್ರೆಸ್ ನ ಒಂದು ಓಟು ಬಿಜೆಪಿ ಒಂದು ಓಟು ಹಾಕಿಸಿದ್ದಾರೆ. ಇಬ್ಬರು ಧರ್ಮಪತ್ನಿಯರು ಒಂದೇ ಗಂಡ ಏನು ನಾಟಕನಪ್ಪ ನಿಮ್ಮದು ಎಂದು ವ್ಯಂಗ್ಯವಾಗಿ ಟೀಕಿಸಿದರು.
Related Articles
Advertisement
ಪಾಪ ಮನ್ಸೂರ್ ಖಾನ್ ಗೆ ಜಟ್ಕಾ ಮಾಡಿಬಿಟ್ರಲ್ಲ. ಹಲಾಲ್ ಮಾಡಿದ್ದಾದರೂ ನಡಿತಿತ್ತು ಜಟ್ಕಾ ಮಾಡಿಬಿಟ್ಟರಲ್ಲಾ. ನನಗೂ ಕಾಂಗ್ರೆಸ್ ನವರು ಜಟ್ಕಾ ಮಾಡೋದಕ್ಕೆ ಹೊರಟಿದ್ದರು. ನಾನು ತಪ್ಪಿಸಿಕೊಂಡು ಬಂದು ಕುಮಾರಸ್ವಾಮಿ ಪಕ್ಕದಲ್ಲಿ ಗಂಡಸಾಗಿ ಕುಳಿತಿದ್ದೇನೆ ಎಂದರು.
12 ಜನರನ್ನು ಸಿದ್ದರಾಮಯ್ಯ ಮುಂಬೈಗೆ ಕಳಿಸಿ ಮಂಚದ ಮೇಲೆ ಮಲಗಿಸಿ ವಿಡಿಯೋ ಮಾಡಿಸಿ, ಯಡಿಯೂರಪ್ಪನ ಸಿಎಂ ಮಾಡಿದರು. ಏರ್ಪೋರ್ಟ್ ನಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪನ ಜೊತೆಗೆ ಈಗಲೂ ಡೀಲ್ ಮಾಡ್ಕೊಂಡಿಕೊಂಡಿದ್ದಾರೆ. ಸಿಟಿ ರವಿ ಅದಕ್ಕೆ ಕಾಂಗ್ರೆಸ್ ಆಫೀಸಿಗೆ ಹೋಗಿ ಅಭಿನಂದನೆ ಸಲ್ಲಿಸಿದ್ದಾರೆ. ಒಬ್ಬರ ಬಳಿ ತಾಳಿ ಕಟ್ಟಿಸಿಕೊಳ್ಳೋದು ಇನ್ನೊಬ್ಬರ ಹತ್ತಿರ ಬಾನ ಮಾಡ್ತೀರಲ್ಲ ನಾಚಿಕೆಗಟ್ಟವರು, ಮಾನಗೆಟ್ಟವರು ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಕಾರ್ಯಕರ್ತರಿಗೆ ನೋವಿದೆ, ಜನರಲ್ಲಿ ಆಕ್ರೋಶ ಇದೆ. ಇವರು ಬಿಬಿಎಂಪಿ ಚುನಾವಣೆ ಮಾಡಲ್ಲ ಗೊತ್ತಿದೆ. ಕುಮಾರಸ್ವಾಮಿ ಬಗ್ಗೆ ಗುಬ್ಬಿ ಶ್ರೀನಿವಾಸ್ ಮಾತಾಡ್ತಿದ್ದಾನೆ ಅಂತ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ನಾಯಿ ಮನುಷ್ಯನಿಗೆ ಕಚ್ಚುತ್ತದೆ ಹೊರತು ಮನುಷ್ಯ ನಾಯಿಗೆ ಕಚ್ಚುವುದಿಲ್ಲ ಎಂದು ತೀಕ್ಷ್ಣವಾಗಿ ಟೀಕಿಸಿದರು.