Advertisement

ಹೆಚ್.ಡಿಡಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಕೆ.ಎನ್ ರಾಜಣ್ಣ ವಿರುದ್ಧ ಭುಗಿಲೆದ್ದ ಆಕ್ರೋಶ

01:23 PM Jul 02, 2022 | Team Udayavani |

ಕುಣಿಗಲ್ : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ.ದೇವೇಗೌಡ ಅವರ ವಿರುದ್ದ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರ ಅವಹೇಳನಾಕಾರಿ ಹೇಳಿಕೆಯನ್ನು ಖಂಡಿಸಿ ತಾಲೂಕು ಜೆಡಿಎಸ್ ವತಿಯಿಂದ ಪಟ್ಟಣದ ಎನ್.ಹುಚ್ಚಮಾಸ್ತಿಗೌಡ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ, ರಾಜಣ್ಣ ಅವರ ಅಣಕು ಶವಯಾತ್ರೆ , ಪ್ರತಿಕೃತಿ ದಹನ ಮಾಡಿದರು.

Advertisement

ಮಧುಗಿರಿ ಕಾರ್ಯ ಕ್ರಮ ಒಂದರಲ್ಲಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ಹೆಚ್.ಡಿ.ದೇವೇಗೌಡ ಅವರನ್ನು ಇಬ್ಬರು ಒತ್ತಿಕೊಂಡು ಹೊಗುತ್ತಿದ್ದಾರೆ, ನಾಲ್ಕು ಮಂದಿ ಹೊತ್ತಿಕೊಂಡು ಹೊಗುವ ಕಾಲ ಶೀಘ್ರದಲ್ಲೇ ಬರುತ್ತದೆ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದನ್ನು ಎಂದು ಆರೋಪಿಸಿ ಮಾಜಿ ಸಚಿವ ಡಿ.ನಾಗರಾಜಯ್ಯ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್ ಜಗದೀಶ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಾಜಣ್ಣ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ ರಾಜಣ್ಣ ಅವರು ಅವರ ಹಿರಿತದ ಬಗ್ಗೆ ಯೋಚನೆ ಮಾಡಿ ಮಾತನಾಡಬೇಕಿತ್ತು, ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ದೇವೇಗೌಡರು ಶಾಸಕರಾಗಿ ಸಂಸದರಾಗಿ, ರಾಜ್ಯದ ಮುಖ್ಯ ಮಂತ್ರಿಯಾಗಿ ಬಳಿಕ ದೇಶದ ಪ್ರಧಾನಿಯಾಗಿ, ರಾಜ್ಯಕ್ಕೆ ಹಾಗೂ ದೇಶಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಅವರು ಯಾವುದೇ ಒಂದು ಜಾತಿಗೆ ಸಮೀಪವಾಗಿಲ್ಲ ಅವರ ಅಧಿಕಾರದ ಅವಧಿಯಲ್ಲಿ ಎಲ್ಲಾ ಸಮುದಾಯದ ಅಭಿವೃದ್ದಿಗೆ ಅನೇಕ ಕೊಡುಗೆಯನ್ನು ನೀಡಿದ್ದಾರೆ. ಅಂತಹ ಮಹಾನ್ ನಾಯಕರ ವಿರುದ್ದ ಮಾತನಾಡಬೇಕಾದರೆ ಯೋಚಿಸಿ ಮಾತನಾಡಬೇಕಿತ್ತು. ಇದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವಂತದಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸವದತ್ತಿ ಯಲ್ಲಮ್ಮನೂ ಸಿದ್ದರಾಮಯ್ಯರನ್ನು ಕಾಪಾಡಲಾರಳು: ಬಿಜೆಪಿ ವ್ಯಂಗ್ಯ

ಉಚ್ಚಾಟನೆಗೆ ಆಗ್ರಹ : ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿ,  ಕಣ್ಣೀರು ಹೊರೆಸುವಂತಹ ಕೆಲಸ ಮಾಡಬಾರದು, ಇದನ್ನು ಒಪ್ಪಲು ಸಾಧ್ಯವಿಲ್ಲ, ಅವರನ್ನು ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ನಾಗರಾಜಯ್ಯ ಒತ್ತಾಯಿಸಿದರು.

Advertisement

ಮಧುಗಿರಿ ಜನ ಸೋಲಿಸಿ: ದೇವೇಗೌಡರಿಗೆ ಅಪಮಾನ ಮಾಡಿರು  ರಾಜಣ್ಣ ಅವರನ್ನು ಮಧುಗಿರಿ ಕ್ಷೇತ್ರದ ಜನ ಸೋಲಿಸುವ ಮೂಲಕ ತಕ್ಕ ಉತ್ತರ ನೀಡಬೇಕೆಂದು ಹೇಳಿದರು.

ಪ್ರತಿಭಟನೆಯಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಹರೀಶ್ ನಾಯ್ಕ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್ ಹರೀಶ್, ಗ್ರಾ.ಪಂ ಅಧ್ಯಕ್ಷ ಎಡಿಯೂರು ದೀಪು, ಸದಸ್ಯ ತರಿಕೆರೆ ಪ್ರಕಾಶ್, ಜಗದೀಶ್ ಮತ್ತಿತರರು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next