Advertisement

ಮರಳು ಮಾಫಿಯಾದಿಂದ ಜೀವ ಬೆದರಿಕೆ: ರಕ್ಷಣೆ ಬೇಕು ಎಂದ ಜೆಡಿಎಸ್ ಶಾಸಕಿ

09:39 PM Jul 13, 2023 | Team Udayavani |

ವಿಧಾನಸಭೆ: ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಗುರುವಾರ  ವಿಧಾನಸಭಾ ಕಲಾಪದಲ್ಲಿ ಜೀವ ಬೆದರಿಕೆಯಿದೆ ಎಂದು ರಕ್ಷಣೆ ಕೋರಿದ್ದಾರೆ

Advertisement

ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ಮಾತನಾಡಿದ ಶಾಸಕಿ, ತಾವು ಪ್ರತಿನಿಧಿಸುವ ದೇವದುರ್ಗ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆ ತಡೆಯಲು ಯತ್ನಿಸಿದ್ದಕ್ಕೆ ಜೀವ ಬೆದರಿಕೆ ಹಾಕಲಾಗಿದೆ. ಪೊಲೀಸರು ನಿಷ್ಕ್ರಿಯತೆಯನ್ನು ತೋರುತ್ತಿದ್ದಾರೆ ಎಂದು ಮೊದಲ ಬಾರಿಯ ಶಾಸಕಿ ಯಾವುದೇ ಹೆಸರನ್ನು ತೆಗೆದುಕೊಳ್ಳದೆ, ಮಾಜಿ ಶಾಸಕರ ಬೆಂಬಲಿಗರು ತಮ್ಮ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಶಾಸಕಿ ವ್ಯಕ್ತಪಡಿಸಿದ ಕಳವಳಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಗೃಹ ಸಚಿವರೊಂದಿಗೆ ಮಾತನಾಡುವುದಾಗಿ ಸ್ಪೀಕರ್ ಯು.ಟಿ.ಖಾದರ್ ಭರವಸೆ ನೀಡಿದರು.

“ನನ್ನ ಕ್ಷೇತ್ರದ ಜನರು ಶಾಂತಿಯುತ ದೇವದುರ್ಗವನ್ನು ಬಯಸುತ್ತಾರೆ ಆದರೆ ಅಲ್ಲಿ ಅಕ್ರಮ ಮದ್ಯ, ಮಟ್ಕಾ ಮತ್ತು ಅಕ್ರಮ ಮರಳು ವ್ಯಾಪಾರ ವಿಪರೀತವಾಗಿದೆ. ದೇವದುರ್ಗದಲ್ಲಿ ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ಪೊಲೀಸರು ನಿಷ್ಕ್ರಿಯರಾಗಿದ್ದಾರೆ” ಎಂದು ಕರೆಮ್ಮ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next