Advertisement

ಜೆಡಿಎಸ್ ಮುಖಂಡನ ತೋಟದಲ್ಲಿ ಬೆಂಕಿ; ಬೆಲೆ ಬಾಳುವ ಮರಗಳು ಭಸ್ಮ

07:58 PM Mar 16, 2023 | Team Udayavani |

ಹುಣಸೂರು: ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ಲಕ್ಷಾಂತರ ರೂ ಬೆಲೆ ಬಾಳುವ ಮರಗಳು ಬೆಂಕಿಗಾಹುತಿಯಾಗಿದೆ.

Advertisement

ಹುಣಸೂರು ತಾಲೂಕಿನ ರತ್ನಪುರಿ- ಚೌಡಿಕಟ್ಟೆ ರಸ್ತೆಯಲ್ಲಿ ತಾ.ಪಂ.ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಪ್ರಭಾಕರ್ ಕುಟುಂಬಕ್ಕೆ ಸೇರಿದ 6 ಎಕರೆ ತೋಟದಲ್ಲಿ ಎಲ್ಲಾ ಬಗೆಯ ಮರಗಳು ಬೆಳೆಸಿರುವ ಜೊತೆಗೆ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಧ್ಯಾಹ್ನ ಸುಮಾರು 1 ಗಂಟೆ ವೇಳೆಯಲ್ಲಿ ಯಾರೋ ಕಿಡಿಗೇಡಿಗಳು ತೋಟಕ್ಕೆ ಬೆಂಕಿ ಹಾಕಿದ್ದು ಇದರಿಂದ 6 ತೆಂಗಿನ ಮರಗಳು, 25 ತೇಗ, 50 ಅಡಿಕೆ ಸಸಿಗಳು ಸುಟ್ಟು ಹೋಗಿದ್ದು ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರಿಂದ ಇನ್ನೂ ಆಗಬಹುದಾದ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಸುಮಾರು ನಾಲ್ಕು ಲಕ್ಷರೂ ನಷ್ಟ ಸಂಭವಿಸಿದೆ.

ತೋಟದ ಮಾಲಿಕನ ಆರೋಪ
ತೋಟದಲ್ಲಿ ನನ್ನ ತಂದೆ ತಾಯಿ ಇಬ್ಬರೆ ವಾಸವಾಗಿದ್ದು ನಾನು ಮತ್ತು ನನ್ನ ಕುಟುಂಬ ಬೇರೆ ಕಡೆ ವಾಸ ಮಾಡುತ್ತಿದ್ದೇವೆ. ನಾನು ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು. ರಾಜಕೀಯ ವೈಮನಸ್ಸಿನಿಂದ ಯಾರೋ ಕಿಡಿಗೇಡಿಗಳು ತೊಟಕ್ಕೆ ಬೆಂಕಿ ಹಾಕಿದ್ದು. ದಯಮಾಡಿ ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವುದರ ಜೊತೆಗೆ ತಪ್ಪಿತಸ್ಥರನ್ನು ಪೊಲೀಸರು ಪತ್ತೆ ಹಚ್ಚಿ ಶಿಕ್ಷಿಸಬೇಕು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆಂದು ಪ್ರಭಾಕರ್ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next