Advertisement

ಅಭಿವೃದ್ಧಿಯಲ್ಲಿ ಜೆಡಿಎಸ್‌ ಕೊಡುಗೆ ಅಪಾರ

05:41 PM Feb 02, 2018 | Team Udayavani |

ಕೆಂಭಾವಿ: ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ನಿಗದಿಪಡಿಸಿ ಸಮಾಜದ ಮುಖ್ಯ ವಾಹಿನಿಗೆ ಕರೆತಂದ ಶ್ರೇಯಸ್ಸು ಮಾಜಿ ಪ್ರಧಾನಿ ದೇವೇಗೌಡರಿಗೆ ಸಲ್ಲುತ್ತದೆ ಎಂದು ಕೆಂಭಾವಿ ಬ್ಲಾಕ್‌ ಜೆಡಿಎಸ್‌ ಅಧ್ಯಕ್ಷ ಅಕ್ಸರ್‌ ನಾಲತವಾಡ ಹೇಳಿದರು.

Advertisement

ಪಟ್ಟಣದ ಟಿಪ್ಪು ಸುಲ್ತಾನ್‌ ವೃತ್ತದಲ್ಲಿ ನಡೆದ ಮನೆ ಮನೆಗೆ ಕುಮಾರಣ್ಣ, ಅಮೀನರೆಡ್ಡಿ ಯಾಳಗಿ ನಡಿಗೆ ಜನರ ಕಡೆಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಮಾರು 40 ವರ್ಷಗಳಿಂದ ಕೇವಲ ಎರಡೆ ಕುಟುಂಬಗಳು ಶಹಾಪುರ ಮತಕ್ಷೇತ್ರವನ್ನು ಆಳುತ್ತಿವೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಚರಂಡಿ ವ್ಯವಸ್ಥೆ, ರಸ್ತೆಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಒದಗಿಸುವಲ್ಲಿ ಇಬ್ಬರೂ ನಾಯಕರು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
 
ಯುವ ಮುಖಂಡ ಅಮೀನರೆಡ್ಡಿ ಪಾಟೀಲ ಮಾತನಾಡಿ, ಹಾಲಿ ಶಾಸಕರು ಹಾಗೂ ಮಾಜಿ ಮಂತ್ರಿಗಳು 40 ವರ್ಷಗಳಿಂದ ಶಹಾಪುರ ಮತಕ್ಷೇತ್ರವನ್ನು ಕತ್ತಲೆಯಲ್ಲಿ ಇಟ್ಟಿದ್ದಾರೆ. ಅಭಿವೃದ್ಧಿ ಕಡೆಗೆ ಗಮನ ನೀಡದೆ, ಸೋತವರು ಒಂದು ಕಡೆ ಗೆದ್ದವರು ಇನ್ನೊಂದು ಕಡೆಗೆ ಎನ್ನುವಂತಾಗಿದೆ. ದಿನದಿಂದ ದಿನಕ್ಕೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬೆಂಬಲ ಹೆಚ್ಚಾಗುತ್ತಿದೆ. ಮತಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು. 

ಜೆಡಿಎಸ್‌ ತಾಲೂಕಾಧ್ಯಕ್ಷ ವಿಠuಲ ವಗ್ಗಿ, ಶಿವು ಮೋಟಗಿ, ಬಸವರಾಜ ಅರುಣಿ, ರಾಮನಗೌಡ ವಂದಗನೂರ, ರಮೇಶ ಕೊಡಗಾನೂರ, ಹಳ್ಳೆಪ್ಪ ಧರಿ, ಶಬಾjವಲಿ ಚೆನ್ನೂರ, ರಾಜು ಬಿಳವಾರ, ಶರೀಫ್‌ ಸಂಗ್ರಾಮ, ಮಹಾಲಿಂಗಯ್ಯಸ್ವಾಮಿ, ಅಹಮದ್‌ ಖಾಜಿ, ರೆಹಮಾನ್‌ ನಾಲತವಾಡ, ಇಸ್ಮಾಯಿಲ್‌ ಸಾಬ ಹುಣಸಗಿ, ದಾವಲಸಾಬ ಮುಲ್ಲಾ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next