Advertisement

ದೇಗುಲ ಪ್ರವೇಶ ಅಭಿಪ್ರಾಯ ಸ್ವಾಗತಿಸಿದ ಜಯಾಮಾಲ

10:13 AM Jul 19, 2018 | Team Udayavani |

ಬೆಂಗಳೂರು: “ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿಷೇಧ ಅಸಂವಿಧಾನಿಕ’ ಎಂಬ ಸುಪ್ರೀಂಕೋರ್ಟ್‌ ಅಭಿಪ್ರಾಯ ಸ್ವಾಗತಾರ್ಹ ಎಂದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ, ಮಹಿಳೆಗೆ ಸಮಾಜದಲ್ಲಿ ಅನ್ಯಾಯ ಆದಾಗಲೆಲ್ಲಾ, ನ್ಯಾಯಾಲಯದಿಂದ ಆಕೆಗೆ ನ್ಯಾಯ ಸಿಕ್ಕಿದೆ ಎಂದರು.

Advertisement

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಅಭಿಪ್ರಾಯ, ಅಂತಿಮ ತೀರ್ಮಾನವೂ ಸಹ ಐತಿಹಾಸಿಕವಾಗಲಿದೆ ಎಂದು ನನಗೆ ವಿಶ್ವಾಸವಿದೆ. ಸಮಾಜದಲ್ಲಿ ಮಹಿಳೆಗೆ ಅನ್ಯಾಯವಾದಾಗ, ತಾರತಮ್ಯ ಆದಾಗ ನ್ಯಾಯಾಲಯ ಹೆಣ್ಣಿನ ಪರ ನಿಂತಿದೆ. ಕಾನೂನು ಮೂಲಕ ಆಕೆಗೆ ಜಯ ಸಿಕ್ಕಿದೆ. ಏಕೆಂದರೆ ನಮ್ಮ ಸಂವಿಧಾನ ಅಷ್ಟೊಂದು ಗಟ್ಟಿಯಾಗಿದೆ ಎಂದರು.

ಸಂವಿಧಾನ ಬರೆದವರು ಗಂಡಿಗೊಂದು ದೇವಸ್ಥಾನ, ಹೆಣ್ಣಿಗೊಂದು ದೇವರು ಎಂದು ಮಾಡಿಲ್ಲ. 1986ರಿಂದ 91ರವರೆಗೆ ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆ ಯರ ಪ್ರವೇಶಕ್ಕೆ ಅವಕಾಶವಿತ್ತು. 91ರಲ್ಲಿ ಏಕ ಸದಸ್ಯಪೀಠ ತೀರ್ಪು ನೀಡಿದ್ದರಿಂದ ಪ್ರವೇಶ ನಿಷೇಧಿಸಲಾಗಿತ್ತು. ಈಗ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯ ಸಿಕ್ಕಿದೆ. ದೇವಸ್ಥಾನದ ವಿಚಾರದಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ ಸರಿಯಲ್ಲ. ದೇವರ ದರ್ಶನದ ಬಗ್ಗೆ ಪುರಷರಿಗೆ ಎಷ್ಟು ತವಕ, ಭಕ್ತಿ ಇರುತ್ತದೋ, ಮಹಿಳೆಗೂ ಅಷ್ಟೇ ತವಕ ಮತ್ತು ಭಕ್ತಿ ಇರುತ್ತದೆ. ಹೆಣ್ಣಿರಲಿ, ಗಂಡಿರಲಿ ಎಲ್ಲ ಮನುಷ್ಯರು ದೇವರ ಮಕ್ಕಳು. ದೇವರ ಮತ್ತು ಭಕ್ತರ ನಡುವೆ ಕಾನೂನು-ನಿಯಮಗಳು ಅಲ್ಲ, ಭಕ್ತಿ ಮತ್ತು ನಂಬಿಕೆ ಇರುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next