Advertisement

ಜಯಾ ಅಪರಾಧಿಯಲ್ಲ

12:30 AM Jan 24, 2019 | Team Udayavani |

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯ ಲಲಿತಾ ಅವರನ್ನು ಅಕ್ರಮ ಆಸ್ತಿ ಸಂಪಾದನೆ ಮೊಕದ್ದಮೆಯಲ್ಲಿ ಅಪರಾಧಿ ಎಂದು ಕರೆಯುವಂತಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. ಜೊತೆಗೆ, ಅವರು ಅಪರಾಧಿ ಎಂಬ ಕಾರಣಕ್ಕೆ ಅವರ ಸ್ಮಾರಕ ನಿರ್ಮಿಸದಂತೆ ತಡೆ ನೀಡಬೇಕೆಂದು ಅರ್ಜಿದಾರರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಸಾರ್ವಜ ನಿಕರ ಹಣ ಬಳಸಿ ಜಯಲಲಿತಾ ಸ್ಮಾರಕ ನಿರ್ಮಿಸುವುದನ್ನು ವಿರೋಧಿಸಿ ದೇಶೀಯ ಮಕ್ಕಳ್‌ ಶಕ್ತಿ ಕಚ್ಚಿ ಅಧ್ಯಕ್ಷ ಎಂ.ಎಲ್‌. ರವಿ ದೂರು ಸಲ್ಲಿಸಿದ್ದರು. ಸರ್ಕಾರ ಜಯಲಿಲಿತಾರ ಹಣ ಬಳಸಿ ಸ್ಮಾರಕ ನಿರ್ಮಿಸುತ್ತಿದ್ದರೆ ಅದನ್ನು ವಾಪಸು ನೀಡಲು ಕ್ರಮ ಕೈಗೊಳ್ಳಬೇಕು. ಏಕೆಂದರೆ ಅದು ಜಯಲಲಿತಾರ ಅಕ್ರಮ ಆಸ್ತಿಯಾದ್ದರಿಂದ ಅದು ಸಾರ್ವಜನಿಕರಿಗೆ ಸೇರಿದ್ದು ಎಂದು ಅರ್ಜಿಯಲ್ಲಿ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next