Advertisement

ಜವಾಬ್‌ನ 16ನೇ ವಾರ್ಷಿಕ ಮಹಾಸಭೆ: ಸಾಧಕರಿಗೆ ಸಮ್ಮಾನ

03:57 PM Oct 07, 2017 | Team Udayavani |

ಮುಂಬಯಿ: ಜುಹೂ- ಅಂಧೇರಿ- ವಸೋìವಾ-ವಿಲೇಪಾರ್ಲೆ ಅಸೋಸಿಯೇಶನ್‌ ಆಫ್‌ ಬಂಟ್ಸ್‌ ಜವಾಬ್‌ ಇದರ 16 ನೇ ವಾರ್ಷಿಕ ಮಹಾಸಭೆಯು ಅ. 1 ರಂದು ಸಂಜೆ ಅಂಧೇರಿ ಪಶ್ಚಿಮದ ರಿನಾಯ್‌ಸೆನ್ಸ್‌ ಕ್ಲಬ್‌ನಲ್ಲಿ ಜವಾಬ್‌ನ ಅಧ್ಯಕ್ಷ ಬಿ. ಶಿವರಾಮ್‌ ನಾೖಕ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಜವಾಬ್‌ ಪರಿವಾರದ ಯುವ ವೈದ್ಯರುಗಳಾದ ನರರೋಗ ತಜ್ಞ ಡಾ| ಅಶುತೋಷ್‌ ನರೇಂದ್ರ ಶೆಟ್ಟಿ ಮತ್ತು  ಡಾ| ದಿವ್ಯಾ ಅಶುತೋಷ್‌ ಶೆಟ್ಟಿ  ದಂಪತಿ, ಕ್ಯಾನ್ಸರ್‌ ತಜ್ಞ ಡಾ| ಶ್ರವಣ್‌ ಸದಾನಂದ ಶೆಟ್ಟಿ ಮತ್ತು  ಪ್ರಜ್ಞಾ ಶ್ರವಣ್‌ ಶೆಟ್ಟಿ ದಂಪತಿಯನ್ನು ಜವಾಬ್‌ ಪರಿವಾರದ ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಕೋಶಾಧಿಕಾರಿ ಅಶೋಕ್‌ ಕುಮಾರ್‌ ಆರ್‌. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ರಮೇಶ್‌ ಎನ್‌. ಶೆಟ್ಟಿ ಅವರು ಸಮ್ಮಾನಿತರನ್ನು ಪರಿಚಯಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. 

ಚಿತ್ರ: ಪ್ರೇಮನಾಥ ಶೆಟ್ಟಿ  ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next