Advertisement

ಕಾನೂನು ಜಾಗೃತಿಗೆ 507 ಹಳ್ಳಿಗಳಿಗೆ ಜಾಥಾ

02:56 PM Nov 13, 2021 | Team Udayavani |

ಚಾಮರಾಜನಗರ: ವಿವಿಧ ಇಲಾಖೆಗಳ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ಕಾನೂನು ಜಾಗೃತಿಗಾಗಿ ಬೈಕ್‌ ಜಾಥಾ ನಡೆಯಿತು.

Advertisement

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನ್ಯಾಯಾಧೀಶ ಸದಾಶಿವ ಎಸ್‌ ಸುಲ್ತಾನ್‌ಪುರಿ ಅವರು ಸ್ವತಃ ಬೈಕ್‌ ಓಡಿಸಿ ಜಾಥಾಗೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾ ಡಿದ ಅವರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಎಲ್ಲರಿಗೂ ಕಾನೂನಿನ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ.

ಇದನ್ನೂ ಓದಿ:- ಕಳ್ಳತನ; 5 ದಿನ ಕಳೆದರೂ ದಾಖಲಾಗದ ದೂರು

ಈ ನಿಟ್ಟಿನಲ್ಲಿ ಜಿಲ್ಲೆಯ 507 ಹಳ್ಳಿಗಳಿಗೆ ತೆರಳಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲು ಬೈಕ್‌ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಮಾತ ನಾಡಿ, ಜನರು ಕಾನೂನು ಅರಿತರೆ ಅಪರಾಧಗಳ ಸಂಖ್ಯೆ ಕಡಿಮೆ ಯಾಗುತ್ತದೆ ಎಂದರು. ನ್ಯಾಯಾಧೀಶರಾದ ಗಣಪತಿ ಜಿ. ಬದಾಮಿ, ಎಂ.ಶ್ರೀಧರ್‌, ಮಹಮ್ಮದ್‌ ರೋಷನ್‌ ಷಾ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next