Advertisement

ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧ ಕೇಂದ : ನಿರುದ್ಯೋಗಿ ಫಾರ್ಮಸಿಸ್ಟ್‌ಗೆ ಆದ್ಯತೆ

03:06 PM Jan 10, 2022 | Team Udayavani |

ಬೆಂಗಳೂರು: ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳನ್ನು ನಿರ್ಮಿಸಿ, ನಿರುದ್ಯೋಗಿ ಫಾರ್ಮಸಿಸ್ಟ್‌ಗಳಿಗೆ ವಿಶೇಷ ಆದ್ಯತೆ ನೀಡುವುದರ ಜತೆಗೆ ಬಡ ರೋಗಿಗಳಿಗೆ ಆಸ್ಪತ್ರೆಯ ಆವರಣದಲ್ಲಿ ಕಡಿಮೆ ಬೆಲೆಯಲ್ಲಿ ಔಷಧ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಖಾಸಗಿ ಮೆಡಿಕಲ್‌ ಅಂಗಡಿಗಳಿಗಿಂತ ಶೇ.70ರಷ್ಟು ಕಡಿಮೆ ದರದಲ್ಲಿ ಔಷಧ ವಿತರಿಸುವ ಜನೌಷಧ ಮಳಿಗೆಯನ್ನು ರಾಜ್ಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ನಿರ್ಮಿಸಲು ಮುಂದಾಗಿದೆ. ನಿರೋದ್ಯೋಗಿ ಯುವಕರಿಗೆ ಮೊದಲ ಆದ್ಯತೆ ನೀಡಿದೆ. ಶೀಘ್ರದಲ್ಲಿ ರಾಜ್ಯಾದಂತ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ 30 ಜಿಲ್ಲಾಸ್ಪತ್ರೆ, 146 ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರ, 204 ಸಮುದಾಯ ಆರೋಗ್ಯಕೇಂದ್ರ, 2508 ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿಯೇ ಬ್ಯೂರೋ ಆಫ್ ಫಾರ್ಮ್ ಪಬ್ಲಿಕ್‌ ಸೆಕ್ಟರ್‌ ಯೂನಿಟ್‌ ಆಫ್ ಇಂಡಿಯಾ (ಬಿಪಿಪಿಐ) ಸಹಕಾರದಲ್ಲಿ ಜನೌಷಧಿ ಕೇಂದ್ರ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ.

Advertisement

159 ಸರ್ಕಾರಿ ಕೇಂದ್ರ: ರಾಜ್ಯದಲ್ಲಿ ಸುಮಾರು 967 ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ 26 ಜಿಲ್ಲಾಸ್ಪತ್ರೆ, 116 ತಾಲೂಕು ಆಸ್ಪತ್ರೆ, 18 ಸಮುದಾಯ ಆರೋಗ್ಯ ಕೇಂದ್ರ, 6 ಪ್ರಾಥಮಿಕ ಆರೋಗ್ಯ ಕೇಂದ್ರ, 6 ಬಿಬಿಎಂಪಿ, 2 ಪೊಲೀಸ್‌ ಠಾಣೆ ಆವರಣದಲ್ಲಿ ಒಟ್ಟು 174 ಸರಕಾರಿ ವ್ಯವಸ್ಥೆಯಲ್ಲಿ ಜನೌಷಧ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಉಳಿದಂತೆ 793 ಜನೌಷಧಿ
ಕೇಂದ್ರಗಳನ್ನು ಖಾಸಗಿಯಾಗಿ ತೆರೆಯಲಾಗಿದೆ.

ಉಚಿತ ಸ್ಥಳಾವಕಾಶ: ಪ್ರಸ್ತುತ ರಾಜ್ಯದ ಜಿಲ್ಲಾ, ತಾಲೂಕು, ಸಮುದಾಯ ಆರೋಗ್ಯ, ಪ್ರಾಥಮಿಕ ಕೇಂದ್ರ ಸೇರಿದಂತೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ತೆರೆಯಲು ಇಚ್ಛಿಸುವವರು ಅರ್ಜಿ ಸಲ್ಲಿಸ ಬಹುದಾಗಿದೆ. ಸರ್ಕಾರಿ ಆಸ್ಪತ್ರೆಗಳ ಒಳ ಆವರಣ ಹಾಗೂ ಸಾರ್ವಜನಿಕ ಜನಸಂಪರ್ಕವಿರುವ ಆಯ್ದ ಸ್ಥಳಗಳಲ್ಲಿ ಕನಿಷ್ಠ 120 ಚದರ ಅಡಿಗಳ ವಿಸ್ತಿರ್ಣದ ವ್ಯವಸ್ಥಿತ ಕಟ್ಟಡದಲ್ಲಿ ಜನೌಷಧಿ ಮಳಿಗೆಗಳನ್ನು ತೆರೆಯಲು ಉಚಿತವಾಗಿ ಸ್ಥಳ ನೀಡಲಾಗುತ್ತದೆ.

ಇದನ್ನೂ ಓದಿ : 1,200 ರೂ.ಗೆ ಯುವಕನ ಕೊಲೆ ಪ್ರಕರಣ : 12 ಆರೋಪಿಗಳ ಬಂಧನ

ವಿಶೇಷ ಸಹಾಯಧನ: ಬ್ಯೂರೋ ಆಫ್ ಫಾರ್ಮ್ ಪಬ್ಲಿಕ್‌ ಸೆಕ್ಟರ್‌ ಯೂನಿಟ್‌ ಇಂಡಿಯಾ ಸಂಸ್ಥೆ ವತಿಯಿಂದ ಪ್ರತಿಯೊಂದು ಜನೌಷಧಿ ಮಳಿಗೆಯನ್ನು ಪ್ರಾರಂಭಿಸಲು ಔಷಧ ಮಳಿಗೆ ತೆರೆಯುವ ಕಟ್ಟಡದ ದುರಸ್ತಿ, ಪುನರ್‌ ನಿರ್ಮಾಣ, ಪೀಠೊಪಕರಣ, ಫ್ರಿಡ್ಜ್ ಹಾಗೂ ಇತರೆ ಅವಶ್ಯಕ ವಸ್ತುಗಳಿಗೆ ಸಂಬಂಧಿಸಿ 2 ಲಕ್ಷ ರೂ. ಹಾಗೂ ಗಣಕಯಂತ್ರ ಹಾಗೂ ಇತರೆ ಉಪಕರಣಗಳ ಖರೀದಿಗೆ ಸುಮಾರು 50,000 ರೂ. ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ಜತೆಗೆ ಪ್ರತಿ ಜನೌಷಧಿ ಮಳಿಗೆಗೆ ಬಿಪಿಪಿಐ ವತಿಯಿಂದ ಮಾಸಿಕ ಖರೀದಿಗೆ ಅಥವಾ ವಹಿವಾಟಿಗೆ ತಕ್ಕಂತೆ ಮಾಸಿಕ 15,000 ರೂ.ನಂತೆ ಒಟ್ಟಾರೆ 2.50 ಲಕ್ಷ ರೂ. ಪ್ರೋತ್ಸಾಹಧನ ಸಿಗಲಿದೆ. ಪೀಠೊಪಕರಣ ಹಾಗೂ ಕಂಪ್ಯೂಟರ್‌ ವೆಚ್ಚವನ್ನು ಮರುಪಾವತಿಸಬೇಕು.

Advertisement

ಯಾರು ಅರ್ಜಿಸಲ್ಲಿಸಬಹುದು?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಮತ್ತು ವೇರ್‌ ಹೌಸಿಂಗ್‌ ಸೊಸೈಟಿ, ರಾಜ್ಯದ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ರಾಜ್ಯದ ಮೈಸೂರು ಸೇಲ್ಸ್‌ಇಂಟರ್‌ ನ್ಯಾಷನಲ್‌ ಲಿಮಿಟೆಡ್‌, ಬೀದರ್‌ ಜಿಲ್ಲಾಧಿಕಾರಿಗಳು, ನಿರುದ್ಯೋಗಿ ಪಾರ¾ಸಿಸ್ಟ್‌ಗಳು, ಇತರೆ ಸ್ವಾಯತ್ತ ಸಂಸ್ಥೆಗಳು ಆಯಾ ಜಿಲ್ಲೆಯ ಜಿಲ್ಲಾ ಸೊಸೈಟಿ ಮೂಲಕ ಅವಶ್ಯಕ ದಾಖಲಾತಿಗಳನ್ನು ಸಲ್ಲಿಸಿ ಅನುಮೋದನೆ ಪಡೆಯಬಹುದು.

ರಾಜ್ಯದಲ್ಲಿ ಎಲ್ಲ ಜಿಲ್ಲಾಸ್ಪತ್ರೆ, ತಾಲೂಕು, ಸಮುದಾಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಕೇಂದ್ರ ಪ್ರಾರಂಭಿಸಲು ಸರಕಾರ ಆದೇಶಿಸಿದೆ. ಬಡ ರೋಗಿಗಳಿಗೆ ಆಸ್ಪತ್ರೆಯ ಆವರಣದಲ್ಲಿಯೇ ಕಡಿಮೆ ಬೆಲೆಯಲ್ಲಿ ಔಷಧಗಳು ಲಭ್ಯವಾಗಲಿದೆ. ಮುಂದಿನ ದಿನದಲ್ಲಿ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನೌಷಧ ಕೇಂದ್ರ ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತದೆ.
– ಡಾ.ಕಿರಣ್‌ ಕುಮಾರ್‌, ಜಂಟಿ ವೈದ್ಯಕೀಯ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next