Advertisement

ಜನಾರ್ಧನ ರೆಡ್ಡಿ ಹೊಸ ಪಕ್ಕಕ್ಕೆ ಉಜ್ವಲ ಭವಿಷ್ಯವಿದೆ: ಅಂಜನಾದ್ರಿ ಅರ್ಚಕ ‌

01:22 PM Dec 27, 2022 | Team Udayavani |

ಗಂಗಾವತಿ: ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಸ್ಥಾಪಿಸಿರುವ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ 2023 ರ ವಿಧಾನಸಭಾ ಚುನಾವಣೆಯಲ್ಲಿ ಉಜ್ವಲ ಭವಿಷ್ಯವಿದ್ದು, ಇಡೀ ರಾಜ್ಯದ ಯುವಜನರು ಗಾಲಿ ಜನಾರ್ಧನರೆಡ್ಡಿ ಜತೆಗಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ ‌ವಿರೋಧಿಸುವ ಬಿಜೆಪಿ, ಕಾಂಗ್ರೆಸ್ ಸೇರಿ ಇತರ ಪಕ್ಷಗಳು ಮಣ್ಣು ಮುಕ್ಕಲಿವೆ ಎಂದು ಕಿಷ್ಕಿಂಧಾ ಅಂಜನಾದ್ರಿ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ತಿಳಿಸಿದ್ದಾರೆ.

Advertisement

ಗಾಲಿ ಜನಾರ್ಧನರೆಡ್ಡಿ ನೂತನವಾಗಿ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಗೆ ಶುಭ ಕೋರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಕಾಂಗ್ರೆಸ್ ಸರಕಾರಗಳು ದೇಶದ ಕಾನೂನು, ಸಂವಿಧಾನವನ್ನು ಉಲ್ಲಂಘಿಸಿ ಜಾತಿ ಧರ್ಮದ ಹೆಸರಿನಲ್ಲಿ ಅವ್ಯವಸ್ಥೆ ಸೃಷ್ಠಿ ಮಾಡಿದ್ದು, ಇದರಿಂದ ಜನಸಾಮಾನ್ಯರ ಬದುಕು‌ ಕಷ್ಟವಾಗಿದೆ. ಪ್ರತಿ ಗ್ರಾಮ ನಗರಗಳಲ್ಲಿ ಜನಾರ್ಧನ ರೆಡ್ಡಿ ಪಕ್ಷಕ್ಕೆ ಅಧಿಕಾರ ದೊರಕಲಿದೆ. ರೆಡ್ಡಿಯವರಿಂದ ಪ್ರಯೋಜನ ಪಡೆದವರು ಬೆನ್ನಿಗೆ‌ ಚೂರಿ ಹಾಕಿದ್ದು, 2023ರ ಚುನಾವಣೆಯಲ್ಲಿ ಕರ್ನಾಟಕದ ಜನತೆ ಬುದ್ದಿ ಕಲಿಸಲಿದ್ದಾರೆ. ಕಿಷ್ಕಿಂಧಾ ಅಂಜನಾದ್ರಿಯ ಹನುಮಂತನ ರೆಡ್ಡಿ ಪಕ್ಷಕ್ಕೆ ಸದಾ ಆಶೀರ್ವಾದ ಮಾಡಲಿದ್ದು ರಾಜ್ಯಕ್ಕೆ ಒಳಿತಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಡಿಯೋದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next