Advertisement

ರೈ ಕೀಳು ಮಾತು ನೆನೆದು ಮತ್ತೆ ಗಳಗಳನೆ ಅತ್ತ ಪೂಜಾರಿ  

03:39 PM Dec 29, 2017 | |

ಮಂಗಳೂರು: ಮಾಜಿ ಕೇಂದ್ರ ಸಚಿವ ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ ಅವರು ಸಚಿವ ರಮಾನಾಥ ರೈ ಅವರ ಅವಾಚ್ಯ ಶಬ್ಧದ ಬೈಗುಳವನ್ನು ನೆನೆದು ಕಣ್ಣೀರಿಟ್ಟ ಘಟನೆ ನಡೆದಿದೆ. 

Advertisement

2 ದಿನಗಳ ಹಿಂದೆ ಬಂಟ್ವಾಳದಲ್ಲಿ ನಡೆದ ಬಿಲ್ಲವ ಸಮಾಜದ ಸಮಾರಂಭವೊಂದರಲ್ಲಿ  ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್‌ ಅವರ ಭಾಷಣದ ವೇಳೆ ಕಣ್ಣೀರಿಟ್ಟು ಸುದ್ದಿಯಾಗಿದ್ದರು. 

ಗುರುವಾರ ಕಂಕನಾಡಿಯ ಬ್ರಹ್ಮ ಬೈದರ್ಕಳ ಗರಡಿಯ ಬ್ರಹ್ಮಕಲಶೋತ್ಸವ ಧಾರ್ಮಿಕ ಸಮಾರಂಭದ ವೇದಿಕೆಯಲ್ಲೇ ರೈ ಅವರ ಹೇಳಿಕೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಈ ವೇಳೆ ವೇದಿಕೆಯಲ್ಲಿದ್ದ ಮೆಯರ್‌ ಕವಿತಾ ಸನಿಲ್‌ ಅವರೂ ಭಾವುಕರಾಗಿ ಕಣ್ಣೀರು ಸುರಿಸಿದ್ದು ಕಂಡು ಬಂದಿತು. ವೇದಿಕೆಯಲ್ಲಿ ಕಲ್ಲಡ್ಕ ಪ್ರಭಾಕರ್‌ ಭಟ್‌ ಸೇರಿದಂತೆ ಬಿಜೆಪಿ ,ಕಾಂಗ್ರೆಸ್‌ನ ಕೆಲ ಮುಖಂಡರು ಉಪಸ್ಥಿತರಿದ್ದರು. 

ಭಾಷಣ ಆರಂಭದಲ್ಲೇ ಗಳಗಳನೆ ಅತ್ತ ಪೂಜಾರಿ ‘ನನ್ನ ತಾಯಿ ಚೆನ್ನಮ್ಮ , ಅವರ ತಾಯಿ ದೇಯಿ ಬೈದೆತಿ , ಇದು ಸತ್ಯಕ್ಕಾಗಿ  ಹೋರಾಡಿದ ಕೋಟಿ ಚೆನ್ನಯ್ಯರ ಗರೋಡಿ ..ರೈ ಅವರು ನನ್ನನ್ನು ಸೂ..ಮಗ ಎಂದಿದ್ದಾರೆ.ನಾನು ನನ್ನ ತಂದೆಯ ಮಗ. ಕೋಟಿ ಚೆನ್ನಯರು ಸತ್ಯ, ಧರ್ಮ, ನ್ಯಾಯಕ್ಕೆಂದು ಹೋರಾಡಿದವರು.ನ್ಯಾಯ ಕೊಡುವವರೂ ಅವರೇ, ಧರ್ಮ ಕಾಪಾಡುವವರೂ ಅವರೇ.ಇಂದು ಅವರ ಬಳಿ ನನಗೆ ನ್ಯಾಯ ಕೊಡು ಎಂದು ಕೇಳುತ್ತಿದ್ದೇನೆ’ ಎಂದು ಎಂದು ಹಣೆಗೆ ಕೈ ಬಡಿದುಕೊಂಡು ಗೋಳಿಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next