Advertisement

ಬ್ರಹ್ಮಾವರ: ಜನೌಷಧ ಕೇಂದ್ರದಲ್ಲಿ ಜನದಟ್ಟಣೆ

10:04 PM Apr 17, 2020 | Sriram |

ಬ್ರಹ್ಮಾವರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದಲ್ಲಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರದಲ್ಲಿ ದಿನದಿಂದ ದಿನಕ್ಕೆ ಜನದಟ್ಟಣೆ ಹೆಚ್ಚುತ್ತಿದೆ.

Advertisement

ಬ್ರಹ್ಮಾವರ ಜಯಂಟ್ಸ್‌ ಗ್ರೂಪ್‌ನ ವತಿಯಿಂದ ನಡೆಸಲ್ಪಡುವ ಈ ಕೇಂದ್ರದಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಶಾಮಿಯಾನ, ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಿಬಂದಿಗಳಾದ ವಿಮಲ ನಾೖಕ್‌, ಪವಿತ್ರ ನಾೖಕ್‌, ಶಂಕರ ನಾೖಕ್‌, ಸಂಧ್ಯಾ ಭಂಡಾರಿ, ಫಾರ್ಮಾಸಿಸ್ಟ್‌ ವಿಲ್ಸನ್‌ ಡಿಸಿಲ್ವ ಅವರು ಸೇವೆ ಸಲ್ಲಿಸುತ್ತಿದ್ದು, ಆಡಳಿತ ನಿರ್ದೇಶಕ ಸುಂದರ್‌ ಪೂಜಾರಿ ಮೂಡುಕುಕ್ಕುಡೆ, ಗೌ. ಸಲಹೆ ಗಾರ ಮಧುಸೂದನ್‌ ಹೇರೂರು, ನಿರ್ದೇಶಕರಾದ ವಿವೇಕ್‌ ಕಾಮತ್‌, ಶ್ರೀನಾಥ್‌ ಕೋಟ, ಅಣ್ಣಯ್ಯದಾಸ್‌ ಸಂಘಟಿಸುತ್ತಿದ್ದಾರೆ. ಅಲ್ಲದೆ ಜನೌಷದಿ ಕೇಂದ್ರದ ವತಿಯಿಂದ ಬ್ರಹ್ಮಾವರದ ಎಸ್‌ಟಿ ಕಾಲೋನಿ ನಿವಾಸಿಗಳಿಗೆ, ಅಪ್ಪ ಅಮ್ಮ ಅನಾಥಾಶ್ರಮ ಮತ್ತು ಸ್ಪಂದನ ವಿಕಲ ಚೇತನ ಮಕ್ಕಳ ಶಾಲೆಗಳಿಗೆ ಸುಮಾರು ರೂ. 10,000 ಬೆಲೆಯ ತರಕಾರಿ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next