Advertisement

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

01:58 AM Jul 06, 2022 | Team Udayavani |

ಶ್ರೀನಗರ: ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆ ಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Advertisement

ಹೀಗಾಗಿ ಯಾತ್ರಿಗಳಿಗೆ ನುನ್ವಾನ್‌ ಮತ್ತು ಬಲ್ತಾಲ್‌ ಬೇಸ್‌ಕ್ಯಾಂಪ್‌ನಿಂದ ಪ್ರಯಾಣ ಕೈಗೊಳ್ಳಲು ಅನುಮತಿ ನಿರಾಕರಿಸಲಾಗಿದೆ.

ಹವಾಮಾನದಲ್ಲಿ ಸುಧಾರಣೆಯಾದ ಕೂಡಲೇ ಯಾತ್ರೆ ಮುಂದುವರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೇ ವೇಳೆ ಬಿಗಿಭದ್ರತೆಯ ನಡುವೆ 6,351 ಯಾತ್ರಿಗಳು ಜಮ್ಮುವಿನಿಂದ ಭಗವತಿ ನಗರ ಕ್ಯಾಂಪ್‌ಗೆ ತೆರಳಿದ್ದಾರೆ.

ಜೂ. 30ರಿಂದ ಇದುವರೆಗೆ 72 ಸಾವಿರ ಮಂದಿ ಯಾತ್ರಿಗಳು ಅಮರನಾಥ ದೇಗುಲಕ್ಕೆ ಭೇಟಿ ನೀಡಿ, ಹಿಮ ಶಿವಲಿಂಗದ ದರ್ಶನ ಪಡೆದಿದ್ದಾರೆ. ಆ. 11ರಂದು ಯಾತ್ರೆ ಮುಕ್ತಾಯವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next