Advertisement

ಜಲ್ಲಿಕಟ್ಟು : ಇಂದು ಸುಪ್ರೀಂ ತೀರ್ಪು

12:42 AM May 18, 2023 | Team Udayavani |

ಹೊಸದಿಲ್ಲಿ: ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ಆಚರಣೆ ಯಲ್ಲಿರುವ “ಜಲ್ಲಿಕಟ್ಟು” ಕ್ರೀಡೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಸುಪ್ರಿಂ ಕೋರ್ಟ್‌ನ ಸಾಂವಿಧಾನಿಕ ಪೀಠ ಗುರುವಾರ ತನ್ನ ತೀರ್ಪು ಪ್ರಕಟಿಸಲಿದೆ.

Advertisement

ಪ್ರಾಣಿ ಹಕ್ಕುಗಳ ಸಂರಕ್ಷಣ ಸಂಸ್ಥೆ ಪೆಟಾ ಜಲ್ಲಿಕಟ್ಟು ವಿರೋಧಿಸಿ ಸಲ್ಲಿಸಿದ್ದ ಅರ್ಜಿ ಯನ್ನು ನ್ಯಾ| ಕೆ.ಎಂ ಜೋಸೆಫ್, ನ್ಯಾ| ಅಜಯ್‌ ರಸ್ತೋಗಿ, ನ್ಯಾ| ಅನಿರುದ್ಧ ಬೋಸ್‌, ನ್ಯಾ| ಹೃಷಿಕೇಶ್‌ ರಾಯ್‌ ಹಾಗೂ ನ್ಯಾ| ಸಿ.ಟಿ. ರವಿಕುಮಾರ್‌ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿದೆ. ಈ ವೇಳೆ ಜಲ್ಲಿಕಟ್ಟು ಕೇವಲ ಸಾಂಪ್ರ ದಾಯಿಕ ಆಚರಣೆಯಾಗಿದ್ದು, ಪ್ರಾಣಿ ಗಳನ್ನು ಹಿಂಸಿಸುವ ಯಾವುದೇ ಉದ್ದೇಶ ವಿಲ್ಲ. ಪೆರು, ಕೊಲಂಬಿಯಾ, ಸ್ಪೇನ್‌ ಸಹಿತ ಹಲವು ರಾಷ್ಟ್ರಗಳಲ್ಲೂ ಇಂಥ ಆಚರಣೆ ಗಳಿವೆ ಎಂದು ತಮಿಳುನಾಡು ಸರಕಾರ ವಾದಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next