Advertisement

ಬಾಲಿವುಡ್‌ನ‌ ಸಿನೆಮಾ ‘ಪಾಣಿಪತ್‌’ಗೆ ತಕರಾರು

10:13 AM Dec 11, 2019 | Team Udayavani |

ಜೈಪುರ: ಕಳೆದ ಶುಕ್ರವಾರ ಬಿಡುಗಡೆಯಾಗಿರುವ ಬಾಲಿವುಡ್‌ನ‌ ಹೊಸ ಸಿನೆಮಾ ‘ಪಾಣಿಪತ್‌’ಗೆ ತಕರಾರು ತೆಗೆಯಲಾಗಿದೆ. ಸಿನೆಮಾದಲ್ಲಿ ಮಹಾರಾಜ ಸೂರಜ್‌ಮಾಲ್‌ ಜಿ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಹೀಗಾಗಿ, ರಾಜಸ್ಥಾನದ ಜಾಟ್‌ ಸಮುದಾಯದ ಜತೆಗೆ ಸಿನೆಮಾ ಬಿಡುಗಡೆಗೆ ಮುನ್ನ ಚಿತ್ರ ವಿತರಕರು ಮಾತುಕತೆ ನಡೆಸಬೇಕು.

Advertisement

ಅದಕ್ಕಿಂತ ಮೊದಲು ಸಿನೆಮಾ ಬಿಡುಗಡೆಗೆ ಅವಕಾಶ ಮಾಡಿಕೊಡಬಾರದು ಎಂದು ಸಿಎಂ ಅಶೋಕ್‌ ಗೆಹ್ಲೊಟ್‌ ಸೋಮವಾರ ಸೆನ್ಸಾರ್‌ ಮಂಡಳಿಗೆ ಒತ್ತಾಯಿಸಿದ್ದಾರೆ. ರವಿವಾರವಷ್ಟೇ ರಾಜಸ್ಥಾನ ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್‌ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊ‌ಳ್ಳುವ ಹಿನ್ನೆಲೆಯಲ್ಲಿ ಈ ನಿರ್ಧಾರ ಅನಿವಾರ್ಯ ಎಂದು ಪ್ರತಿಪಾದಿಸಿದ್ದರು.

ಅದಕ್ಕೆ ಪೂರಕವಾಗಿ ಜೈಪುರದಲ್ಲಿ ‘ಪಾಣಿಪತ್‌’ ಸಿನೆಮಾ ಪ್ರದರ್ಶಿಸಲು ಚಿತ್ರಮಂದಿರಗಳ ಮಾಲಕರು ನಿರಾಕರಿಸಿದ್ದಾರೆ. ಅರ್ಜುನ್‌ ಕಪೂರ್‌, ಕೃತಿ ಸನೂನ್‌ ಮತ್ತು ಇತರರು ಪ್ರಮುಖ ಭೂಮಿಕೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next