Advertisement

ಬಸ್‌ ಚಾಲಕನಿಗೆ ಜೈಲು ಶಿಕ್ಷೆ

07:34 PM Mar 24, 2023 | Team Udayavani |

ಅರಂತೋಡು: ಇಲ್ಲಿನ ಬಿಳಿಯಾರು ಎಂಬಲ್ಲಿ 2018ರ ಫೆ. 12ರಂದು ಕೆವಿಜಿಯ ಐಪಿಎಸ್‌ ಶಾಲೆಯ ಒಂದನೆಯ ತರಗತಿ ವಿದ್ಯಾರ್ಥಿನಿ ಆಗ್ನೆಯ ಬಾಲು ಬಸ್ಸಿನ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಶಾಲಾ ಬಸ್‌ ಚಾಲಕ ಧನಂಜಯ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Advertisement

ಘಟನೆಗೆ ಸಂಬಂಧಿಸಿ ಅಂದಿನ ತನಿಖಾಧಿಕಾರಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಸತೀಶ್‌ ಕುಮಾರ್‌ ಪ್ರಕರಣ ದಾಖಲಿಸಿಕೊಂಡು ಬಸ್‌ ಚಾಲಕ ಧನಂಜಯ ಮತ್ತು ಬಸ್ಸಿನ ಉಸ್ತುವಾರಿ ದಿನೇಶ್‌ ಮೇಲೆ ದೋಷರೋಪಣ ಪತ್ರವನ್ನು ಕೋರ್ಟಿಗೆ ಸಲ್ಲಿಸಿದ್ದರು.

ತನಿಖೆ ನಡೆಸಿರುವ ನ್ಯಾಯಾಲಯ ಮಾ. 23ರಂದು ತೀರ್ಪು ನೀಡಿದ್ದು , ಚಾಲಕ ಧನಂಜಯನಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ, ದಂಡ ಕಟ್ಟಲು ತಪ್ಪಿದರೆ ಒಂದು ತಿಂಗಳು ಸಜೆ ವಿಧಿಸಿದೆ. ಎರಡನೇ ಆರೋಪಿ ದಿನೇಶ್‌ನನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next