Advertisement

ಸುಳ್ಯ: ಅಡ್ಡಗಟ್ಟಿ ಹಲ್ಲೆಗೈದ ಆರೋಪಿಗಳಿಗೆ ಜೈಲು ಶಿಕ್ಷೆ

09:40 PM Jul 07, 2022 | Team Udayavani |

ಸುಳ್ಯ: ವ್ಯಕ್ತಿಯೊಬ್ಬರು ತನ್ನ ಕುಟುಂಬದ ಜತೆ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿ ಕಣ್ಣಿಗೆ ತೀವ್ರ ಸ್ವರೂಪದ ಗಾಯ ಉಂಟಾಗಲು ಕಾರಣವಾಗಿದ್ದ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಸುಳ್ಯ ತಾಲೂಕಿನ ಕಂದಡ್ಕ ನಿವಾಸಿ ವಿಜಯ ಕುಮಾರ್‌ ತನ್ನ ಕುಟುಂಬದ ಜತೆ ಕಾರಿನಲ್ಲಿ ಪುತ್ತೂರಿಗೆ ಬಂದು ವಾಪಸ್‌ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿಗಳಾದ ಕಂದಡ್ಕ ಸಿಆರ್‌ಸಿ ಕಾಲನಿ ನಿವಾಸಿಗಳಾದ ಶಶಿಕುಮಾರ್‌ ಮತ್ತು ಸತ್ಯರಾಜ್‌ ದ್ವಿಚಕ್ರ ವಾಹನವನ್ನು ಕಾರಿಗೆ ಅಡ್ಡ ಇರಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ವಿಜಯ ಕುಮಾರ್‌ ಅವರ ಕಣ್ಣಿಗೆ ಕಿ ಬಂಚ್‌ನಿಂದ ಹಲ್ಲೆ ನಡೆಸಿದ್ದರು.

ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸೋಮಶೇಖರ್‌ ಎ. ಅವರು ಆರೋಪಿಗಳು ಎಸಗಿದ ಆರೋಪ ಸಾಬೀತಾಗಿದೆ ಎಂದು ಹೇಳಿ ಆರೋಪಿಗಳಿಗೆ 2 ವರ್ಷ 6 ತಿಂಗಳು ಜೈಲು ವಾಸ ಅನುಭವಿಸುವಂತೆ ಹಾಗೂ ತಲಾ 12,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಮತ್ತೆ 6 ತಿಂಗಳು ಜೈಲು ವಾಸ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ.

ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್‌ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next