Advertisement

ಪ್ರತಿ ಹಳ್ಳಿಯಲ್ಲೂ ಜೈ ಶ್ರೀರಾಂ ಅನುರಣನ

01:00 AM Jul 07, 2019 | mahesh |

ಕೋಲ್ಕತಾ: ‘ಜೈ ಶ್ರೀರಾಮ್‌’ ಘೋಷಣೆಯು ಬಂಗಾಳೀಯರ ಸಂಸ್ಕೃತಿಗೆ ಹೊಂದುವಂಥದ್ದಲ್ಲ. ಬಂಗಾಳೀಯರಿಗೆ ‘ಮಾ ದುರ್ಗೆ’ ಎಂಬ ಘೋಷವಾಕ್ಯವೇ ಸರಿಹೊಂದುತ್ತದೆ. ಜೈ ಶ್ರೀರಾಮ್‌ ಹೇಳಿಕೆಯು ಜನರ ಮೇಲೆ ಹಲ್ಲೆ ಮಾಡುವುದಕ್ಕಾಗಿ ಬಳಸಲಾಗುತ್ತಿರುವ ನೆಪವಷ್ಟೇ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್‌ ಹೇಳಿದ್ದು, ಅವರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

Advertisement

ಸೇನ್‌ ಹೇಳಿಕೆ ಖಂಡಿಸಿರುವ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌, ”ಅಮರ್ತ್ಯ ಸೇನ್‌ಗೆ ಬಂಗಾಳೀಯರ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲ. ಹೋಗಲಿ, ಅವರಿಗೆ ಭಾರತೀಯ ಸಂಸ್ಕೃತಿಯಾದರೂ ಗೊತ್ತೇ? ಅದೂ ಗೊತ್ತಿಲ್ಲ. ಹಾಗಾಗಿಯೇ ಅವರು ಇಂಥ ಹೇಳಿಕೆ ನೀಡಿದ್ದಾರೆ. ನಮ್ಮ ದೇಶದ ಪ್ರತಿ ಹಳ್ಳಿಯಲ್ಲೂ ರಾಮನಾಮ ಜಪಿಸಲಾಗುತ್ತಿದೆ. ಈಗ ಅದು ಪಶ್ಚಿಮ ಬಂಗಾಳಕ್ಕೂ ಕಾಲಿಟ್ಟಿದೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next