Advertisement

Belagavi: ಅನಗೋಳದಲ್ಲಿ ಜೈ ಮಹಾರಾಷ್ಟ್ರ ಫಲಕ… ಕನ್ನಡಿಗರಿಂದ ಆಕ್ರೋಶ

07:37 AM Feb 29, 2024 | Team Udayavani |

ಬೆಳಗಾವಿ: ನಗರದ ಅನಗೋಳ ಪ್ರದೇಶದ ಪ್ರಮುಖ ವೃತ್ತದಲ್ಲಿ ಜೈ ಮಹಾರಾಷ್ಟ್ರ ಎಂಬ ಫಲಕ ಹಾಕಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಅನಗೋಳದಲ್ಲಿ ಜೈ ಮಹಾರಾಷ್ಟ್ರ ಚೌಕ್ ಎಂಬ ಫಲಕ ಅಳವಡಿಸಲಾಗಿದ್ದು, ಕೂಡಲೇ ಇದನ್ನು ತೆರವುಗೊಳಿಸಬೇಕು. ಅನ್ಯ ಭಾಷಿಕ ಫಲಕಗಳು, ಅನ್ಯ ರಾಜ್ಯಗಳಿಗೆ ಜೈ ಘೋಷ ಕೂಗಿ ಕನ್ನಡಿಗರ ಮನಸ್ಸಿಗೆ ಧಕ್ಕೆ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.

ಬೆಳಗಾವಿ ನಗರದ ಕೆಲವು ಪ್ರದೇಶಗಳಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಯುತ್ತಿದೆ. ಕನ್ನಡ ಯುವಕರನ್ನು ಮನ ಬಂದಂತೆ ಥಳಿಸಲಾಗುತ್ತಿದೆ. ಈ ಬಗ್ಗೆ ಪೊಲೀಸರು ಅಂಥ ತಪ್ಪಿತಸ್ಥ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Horoscope: ಈ ರಾಶಿಯವರಿಗೆ ಶೇರು ವ್ಯವಹಾರದಲ್ಲಿ ಕೊಂಚ ಲಾಭ…

Advertisement

Udayavani is now on Telegram. Click here to join our channel and stay updated with the latest news.

Next