Advertisement

ಅನುದಾನ ಖರ್ಚಾದರೂ ಸ್ವಚ್ಛವಾಗದ ಚರಂಡಿ

11:36 AM Mar 05, 2020 | Naveen |

ಜಗಳೂರು: 14ನೇ ಹಣಕಾಸು ಯೋಜನೆಯಡಿ ಚರಂಡಿ ಸ್ವಚ್ಛತೆ ಹಾಗೂ ಬೀದಿ ದೀಪಗಳ ದುರಸ್ತಿಗೆ 40 ಸಾವಿರಕ್ಕೂ ಅಧಿಕ ವೆಚ್ಚ ತೋರಿಸಲಾಗಿದ್ದರೂ ಗ್ರಾಮದ ದಲಿತ ಕಾಲೋನಿಯಲ್ಲಿ ಚರಂಡಿಗಳು ಗಬ್ಬು ನಾರುತ್ತಿದ್ದು, ಬೀದಿ ದೀಪದ ವ್ಯವಸ್ಥೆ ಇಲ್ಲದೇ ಈ ಭಾಗದ ಜನರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ಮುಸ್ಟೂರು ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ ದೂರಿದ್ದಾರೆ.

Advertisement

ಗ್ರಾಮದ ಚರಂಡಿ ಮತ್ತು ಬೀದಿ ದೀಪದ ಸಮಸ್ಯೆಯನ್ನು ಬಗೆಹರಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಸಹ ಸದಸ್ಯರ ಮಾತಿಗೆ ಪಿಡಿಒ ಕಿಮ್ಮತ್ತು ನೀಡುತ್ತಿಲ್ಲ. ಬರುವ ಅನುದಾನವನ್ನು ತಮಗೆ ಇಚ್ಛೆ ಬಂದಂತೆ ವೆಚ್ಚ ಮಾಡುತ್ತಾರೆ ಎಂದು ಸದಸ್ಯ ತಿಪ್ಪೇಸ್ವಾಮಿ ದೂರುತ್ತಾರೆ.

ಈ ಕಾಲೋನಿಯಲ್ಲಿ ಚರಂಡಿ ಅಲ್ಲದೇ ಬೀದಿ ದೀಪದ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೇ ಕಳೆದ 15 ದಿನಗಳಿಂದ ಕತ್ತಲೆಯಲ್ಲಿ
ಜೀವನ ಕಳೆಯುವಂತಾಗಿದೆ. ರಾತ್ರಿ ಆಯಿತೆಂದರೆ ಮನೆಗಳಿಗೆ ಹಾವು, ಚೇಳು, ವಿಷ ಜಂತುಗಳು ಬರುತ್ತವೆ ಎನ್ನುತ್ತಾರೆ ಯಲ್ಲಮ್ಮ.

ಚರಂಡಿ ಸ್ವಚ್ಛಗೊಳಿಸಲು ಕಳೆದ ಕೆಲವು ತಿಂಗಳ ಹಿಂದೆ 48,730
ರೂ. ಬ್ಯಾಂಕಿನಿಂದ ತೆಗೆಯಲಾಗಿದೆ. ಆದರೆ ಕೆಲಸ ಮಾತ್ರ ಆಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಚರಂಡಿ ನೀರು ಹೋಗಲು ವ್ಯಕ್ತಿಯೋರ್ವ ಅಡ್ಡಿ ಪಡಿಸುತ್ತಿದ್ದರಿಂದ ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಕೆಲವು ದಿನಗಳ ಹಿಂದೆಯೇ ಹೊಸ ಬಲ್ಪ್ಗಳನ್ನು ಹಾಕಲಾಗಿದೆ. ಸುನಿತಾ,
ಪಿಡಿಒ, ಮುಸ್ಟೂರು ಗ್ರಾಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next