Advertisement

ಪೌರ ಕಾರ್ಮಿಕ ಸೇರಿ ಮೂವರಿಗೆ ವಕ್ಕರಿಸಿದ ಮಹಾಮಾರಿ

11:34 AM Jul 02, 2020 | Team Udayavani |

ಜಗಳೂರು: ತಾಲೂಕಿನಲ್ಲಿ ಮೂರು ಜನರಿಗೆ ಕೋವಿಡ್ ದೃಢಪಟ್ಟಿದ್ದು, ಸೋಂಕಿತರನ್ನು ದಾವಣಗೆರೆ ಕೋವಿಡ್‌ ಆಸ್ಪತ್ರೆಗೆ ಕಳಿಸಲಾಗಿದ್ದು ಅವರ ಕುಟುಂಬ ವರ್ಗದವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Advertisement

ತಾಲೂಕಿನಲ್ಲಿ ಪ್ರಥಮ ಬಾರಿಗೆ ಪಟ್ಟಣದ ಡಿಟಿಪಿ ಆಪರೇಟರ್‌ ಗೆ ತಗುಲಿದ ಮರುದಿನವೇ ಜೆಸಿಆರ್‌ ಬಡಾವಣೆಯ ಪೌರ ಕಾರ್ಮಿಕನೋರ್ವನಿಗೆ ಸೋಂಕು ತಗುಲಿದೆ. ಈತ ಡಿಟಿಪಿ ಸೆಂಟರ್‌ ಇರುವ ರಸ್ತೆಯಲ್ಲಿ ಪ್ರತಿ ದಿನ ಚರಂಡಿ ಮತ್ತು ರಸ್ತೆಯನ್ನು ಸ್ವಚ್ಛಗೊಳಿಸಲು ಹೋಗುತ್ತಿದ್ದ ಎನ್ನಲಾಗಿದೆ. ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಟುಂಬದ ನಾಲ್ಕು ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇವರ ಮನೆಯ ನೂರು ಮೀಟರ್‌ ಸುತ್ತಳತೆಯ ಎಲ್ಲಾ ಮನೆಗಳಲ್ಲಿ ಇರುವ ಜನರ ಗಂಟಲು ದ್ರವ ಮಾದರಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸೋಂಕಿತ ವ್ಯಕ್ತಿಯ ಬೀದಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಚಿಕ್ಕಉಜ್ಜಿನಿ ಗ್ರಾಮದ 11 ವರ್ಷದ ಬಾಲಕಿಗೆ ಕೋವಿಡ್ ಸೋಂಕು ತಗುಲಿದ್ದು, ಕಳೆದ 4 ದಿನಗಳ ಹಿಂದೆ ಲೋಕಿಕೆರೆಯಲ್ಲಿ ನಡೆದ ಮದುವೆಗೆ ಹೋದ ವೇಳೆ ಬೆಂಗಳೂರಿನಿಂದ ಬಂದ ಬಾಲಕಿಯ ಮಾವನಿಗೆ ಕೋವಿಡ್ ತಗುಲಿರುವ ಹಿನ್ನಲೆಯಲ್ಲಿ ಈ ಬಾಲಕಿಗೂ ಸೋಂಕು ಕಂಡು ಬಂದಿದೆ. ಇವರ ಮನೆಯಲ್ಲಿದ್ದ 5 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದ್ದು,ಮನೆಯ ಬೀದಿಯನ್ನು ಸೀಲ್‌ಡೌನ್‌ ಮಾಡಿ ಪಪಂ ವತಿಯಿಂದ ರಸಾಯನಿಕ ದ್ರಾವಣವನ್ನು ಸಿಂಪಡಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next