Advertisement

ಇಷ್ಟಲಿಂಗ ಪೂಜೆಯಿಂದ ಭವಬಂಧನದ ಮುಕ್ತಿ ಸಾಧ್ಯ

11:20 AM May 17, 2022 | Team Udayavani |

ಮುಂಬಯಿ: ಇಷ್ಟಲಿಂಗದ ಪೂಜೆಯಿಂದ ಭವಬಂಧನದ ಮುಕ್ತಿ ಸಾಧ್ಯ. ಜಗಜ್ಯೋತಿ ಬಸವೇಶ್ವರರು ತಮ್ಮ ಕಾರ್ಯವೈಖರಿಯ ಮುಖಾಂ ತರ ಜನಮನವನ್ನು ಶ್ರೀಮಂತಗೊಳಿಸಿದರು ಎಂದು ಬಾಗಲಕೋಟೆ ಜಿಲ್ಲೆಯ ಶಿರೂರಿನ ಚಿತ್ತರಗಿ ಮಠದ  ಶ್ರೀ ಗುರು ಬಸವಲಿಂಗ ಮಹಾ ಸ್ವಾಮಿಗಳು ಹೇಳಿದರು.

Advertisement

ಡೊಂಬಿವಲಿ ಪೂರ್ವದ ಶ್ರೀ ಗಣೇಶ ಮಂದಿರದ ವಕ್ರತುಂಡ ಸಭಾ ಗೃಹದಲ್ಲಿ  ಸ್ಥಳೀಯ ಶ್ರೀ ಬಸವ ಸೇವಾ ಮಂಡಳಿ ವತಿಯಿಂದ ಮೇ 7ರಂದು ಆಯೋಜಿಸಿದ ಜಗಜ್ಯೋತಿ ಬಸವೇಶ್ವರರ 890ನೇ ಜಯಂತ್ಯು ತ್ಸವದಲ್ಲಿ  ಅವರು ಆಶೀರ್ವಚಿಸಿದರು.

ಅತ್ಯಂತ ಸುಲಭವಾದ ಯೋಗವೇ ಶಿವಯೋಗವಾಗಿದ್ದು, ನಿತ್ಯ ನಿರಂ ತರವಾಗಿ ಇಷ್ಟಲಿಂಗ ಪೂಜೆ,  ಶರಣರ ವಚನಗಳ ಪಠಣ ದಿಂದ ಮನಸ್ಸು ಶುದ್ಧ ಹಾಗೂ ದೀರ್ಘಾ ಯುಷ್ಯ ಲಭಿಸುವುದು. ಬಸವಾದಿ ಶರಣರ ಧಾರ್ಮಿಕ ಕ್ರಾಂತಿಯ ವಾರಸುದಾರರು ನಾವು ಎಂಬ ಹೆಮ್ಮೆಪಡುವುದರ ಜತೆಗೆ ಬಸವ ತತ್ತÌ – ಸಿದ್ಧಾಂತಗಳನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವುದರೊಂದಿಗೆ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೂಂಡು ಸಾರ್ಥಕ ಜೀವನ ಸಾಗಿಸೋಣ ಎಂದು ಮಹಾಸ್ವಾಮಿಗಳು ಕರೆ ನೀಡಿ, ಡೊಂಬಿವಲಿ ಶ್ರೀ ಬಸವ ಸೇವಾ ಮಂಡಳಿಯ ಕಾರ್ಯ ಅಭಿನಂ ದನೀಯ ಹಾಗೂ ಅನುಕರಣೀಯ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಬಸವ ಸೇವಾ ಮಂಡಳಿಯ ಕಾರ್ಯಾಧ್ಯಕ್ಷ ಬಸಲಿಂಗಪ್ಪ ಸೊಡಗಿ ಮಾತನಾಡಿ, 12ನೇ ಶತಮಾನದಲ್ಲಿ  ಜಗಜ್ಯೋತಿ ಬಸವೇಶ್ವರರು ಜಾತಿ – ಧರ್ಮಗಳ ಭೇದಭಾವ ತೆಗೆದು ಹಾಕುವ ನಿಟ್ಟಿನಲ್ಲಿ  ಮಾಡಿದ ಕಾರ್ಯಗಳನ್ನು ವಿವರಿಸಿದರು. ನಾವು ಬಸವೇಶ್ವರರ ತತ್ತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೂಂಡಾಗ ಮಾತ್ರ ಸಾರ್ಥಕತೆಯ ಬದುಕು ಸಾಗಿಸ ಬಹುದು. ವಿಶ್ವಕ್ಕೆ ಗುರು ಎನಿಸಿಕೊಂಡ ಜಗಜ್ಯೋತಿ ಬಸವೇಶ್ವರರು ನಮ್ಮವರು ಎಂಬ ಹೆಮ್ಮೆ ನಮಗಿರಲಿ ಎಂದರು.

ಗೌರವ ಅತಿಥಿಯಾಗಿದ್ದ ಖ್ಯಾತ ಸಮಾಜ ಸೇವಕ ಮತ್ತು ಶಿವಸೇನೆ ನಾಯಕ ಪ್ರಫುಲ್ಲ ಗಾವಿÛ ಮಾತನಾಡಿ, ಹಾಲಿನಲ್ಲಿ ಸಕ್ಕರೆ ಬೆರೆತಂತೆದ ಮಣ್ಣಿನಲ್ಲಿ  ಒಂದಾಗಿ ಬಾಳುವುದರ ಜತೆಗೆ ನಮ್ಮ ಧರ್ಮ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ. ಜಗಜ್ಯೋತಿ ಬಸವೇಶ್ವರರ ತತ್ತ್ವಗಳು ಅಜರಾಮರವಾಗಿದ್ದು, ನಮ್ಮ ಮಠಾಧೀಶರು ಸಮಾಜ ಬಾಂಧವರನ್ನು ಒಗ್ಗೂಡಿಸಿ ಒಂದೇ ವೇದಿಕೆ ಮೇಲೆ ತರುವ ಪ್ರಯತ್ನ ಮಾಡಬೇಕು ಎಂದರು.

Advertisement

ಮಂಡಳದ ಉಪಕಾರ್ಯಾಧ್ಯಕ್ಷ ಎಂ. ಬಿ. ಬಿರಾದಾರ ಅವರು ಸ್ವಾಗತ ಹಾಗೂ ಪ್ರಸ್ತಾವಿಕವಾಗಿ ಮಾತನಾಡಿ, ದೀನ ದಲಿತರಿಗೆ ಅಮರತ್ವ ನೀಡಿದ ವಿಶ್ವಗುರು ಬಸವೇಶ್ವರರ ಕಾರ್ಯ ಅನುಪಮ. ಅವರ ವಚನಾಮೃತದ ಸವಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸುವುದರ ಜತೆಗೆ ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡೋಣ. ಅದಕ್ಕೆ ತಮ್ಮೆಲ್ಲರ ಸಹಾಯ – ಸಹಕಾರ ನಿರಂತರವಾಗಿರಲಿ ಎಂದರು.

ಆರಂಭದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ವಿಶೇಷ ಪೊಜೆ  ಸಲ್ಲಿಸಿ ಜ್ಯೋತಿ ಬೆಳಗುವುದರ ಮೂಲಕ ಗಣ್ಯರು ಕಾರ್ಯಕ್ರಮವನ್ನು  ಉದ್ಘಾಟಿಸಿದರು. ನಾಗೇಶ್‌ ಬಡಿಗೇರ ಗಣ್ಯರನ್ನು ಪರಿಚ ಯಿಸಿದರು. ರಮೇಶ್‌ ನ್ಹಾವಕರ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿ ದರು. ಚಂದ್ರಕಾಂತ್‌ ಕರಪೆ, ಶಿವಾನಂದ ಸಂಕಪಾಳ, ಪ್ರಶಾಂತ್‌ ಕಾಖಂಡಕಿ, ಸುಭಾಷ್‌ ದೊಡ್ಮನಿ, ನಾಗರಾಜ ಹಲಕಟ್ಟಿ ಹಾಗೂ ಸಂದೀಪ ತುಪ್ಪದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next