Advertisement

ಜಾಧವ್‌ ಬೆನ್ನಿಗೆ ಕೈ ನಾಯಕರು!

11:26 PM Mar 25, 2019 | Sriram |

ಕಲಬುರಗಿಯಲ್ಲಿ ಸಾಮಾನ್ಯವಾಗಿ ಬಿಸಿಲು ಜಾಸ್ತಿ. ಈಗ ಅದರ ಪ್ರಖರತೆಯನ್ನು ಖರ್ಗೆ ಹಾಗೂ ಜಾಧವ ಸ್ಪರ್ಧೆ ಇನ್ನಷ್ಟು ಹೆಚ್ಚಿಸಿದೆ.

Advertisement

ದಿನದಿಂದ ದಿನಕ್ಕೆ ಥರ್ಮಾಮೀಟರ್‌ ಏರುತ್ತಲೇ ಇದೆ. ಆರೋಪ,ಪ್ರತ್ಯಾರೋಪಕ್ಕಂತೂ ಕೊರತೆನೇ ಇಲ್ಲ. ಚುನಾವಣೆ ಘೋಷಣೆಗೂ ಮುನ್ನ ಜಾಧವ್‌ ರಾಜೀನಾಮೆ ಪ್ರಹಸನ ಮುನ್ನೆಲೆಗೆ ಬಂದಿತ್ತು. ಈಗ ಅಧಿಕೃತ ಅಭ್ಯರ್ಥಿಯಾದ ಬಳಿಕ ಕಾವು ಮತ್ತಷ್ಟು ಹೆಚ್ಚಾಗಿದೆ.

ವಿಷಯ ಇದಲ್ಲ, ಖರ್ಗೆ ವಿರುದ್ಧ ತೊಡೆ ತಟ್ಟಿರುವ ಜಾಧವ್‌ಗೆ ಕಾಂಗ್ರೆಸ್‌ ನಾಯಕರದ್ದೇ ಬೆಂಬಲ ಇದೆಯಂತೆ! ಹೈದ್ರಾಬಾದ್‌ ಕರ್ನಾಟಕದಲ್ಲಿ ಎಲ್ಲಿ ಹೋದರೂ ಖರ್ಗೆ ಕುಟುಂಬದ್ದೇ ಮಾತು.

ಇದನ್ನು ಬಹಿರಂಗವಾಗಿ ವಿರೋಧಿಸುವಂತೆಯೂ ಇಲ್ಲ. ಈಗ ಜಾಧವ್‌ ಬಂಡಾಯವೇ ಅವರಿಗೆಲ್ಲ ಜೀವಾಳ. ಹೀಗಾಗಿ ಒಳಗೊಳಗೆ ಜಾಧವ್‌ ಅವರಿಗೆ “ನೈತಿಕ ಬಲ’ ತುಂಬುವ ಕೆಲಸ ಮಾಡುತ್ತಿದ್ದಾರಂತೆ. ಬಿಜೆಪಿ ಸೇರ್ಪಡೆಯಾಗಿರುವ ಖರ್ಗೆ ವಿರೋಧಿಗಳೆಲ್ಲಾ ಈಗ ಕಾಂಗ್ರೆಸ್‌ನಲ್ಲಿರುವ ಅತೃಪ್ತರಿಗೆ ಒಳಗೊಳಗೆ ಗಾಳ ಹಾಕುತ್ತಿದ್ದಾರೆ. ಪರೋಕ್ಷವಾಗಿ
ಬೆಂಬಲ ಕೇಳುತ್ತಿದ್ದಾರೆ. “ಜಾಧವ್‌ ಗೆಲ್ಲಿಸಿ ಕಮಲ ಅರಳಿಸಿ’ ಎಂಬ ಸ್ಲೋಗನ್‌ ಹೇಳಿ ಮನವೊಲಿಸುತ್ತಿದ್ದಾರಂತೆ!

Advertisement

Udayavani is now on Telegram. Click here to join our channel and stay updated with the latest news.

Next