Advertisement

ಗೋವಾ 10 ಕೈ ಶಾಸಕರು ಬಿಜೆಪಿಗೆ: ಪರ್ರಿಕರ್‌ ಪುತ್ರ ಅಸಮಾಧಾನ

01:53 PM Jul 12, 2019 | Vishnu Das |

ಪಣಜಿ: ಗೋವಾದಲ್ಲಿ 10 ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಪಕ್ಷಾಂತರವಾಗಿರುವು ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರ ಪುತ್ರ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

Advertisement

ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಉತ್ಪಲ್‌ ಪರ್ರಿಕರ್‌ , ಇದು ಹೊಸ ಮಾರ್ಗದ ರಾಜಕಾರಣ ನನ್ನ ತಂದೆ ಮಾಡಿದ ಮಾರ್ಗದ ರಾಜಕಾರಣವಲ್ಲ. ಮಾರ್ಚ್‌ 17 ರಂದು ನನ್ನ ತಂದೆ ತೀರಿ ಹೋದಾಗಲೆಆ ಮಾರ್ಗದ ರಾಜಕಾರಣ ಅಂತ್ಯಗೊಂಡಿತು ಎಂದು ನನಗೆ ಗೊತ್ತಿತ್ತು. ಗೋವಾದ ಜನರಿಗೆ ನಿನ್ನೆ ತಿಳಿಯಿತು ಎಂದಿದ್ದಾರೆ.

ಕಾಂಗ್ರೆಸ್‌ನ15 ಶಾಸಕರ ಪೈಕಿ 10 ಮಂದಿ ಶಾಸಕರು ವಿಪಕ್ಷ ನಾಯಕ ಕವಲೇಕರ್‌ ನೇತೃತ್ವದಲ್ಲಿ ಬಿಜೆಪಿಗೆ ಸೇರಿದ್ದರು. ಮೂರನೇ ಎರಡರಷ್ಟು ಶಾಸಕರು ಪಕ್ಷ ತ್ಯಜಿಸಿದ್ದರಿಂದ ಅವರ ಸ್ಥಾನಕ್ಕೆ ಚ್ಯುತಿಯಿಲ್ಲ,ರಾಜೀನಾಮೆಯ ಅಗತ್ಯವಿಲ್ಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next