Advertisement
ತಾಲೂಕಿನ ಸೋಂಪುರ ಹೋಬಳಿಯ ನಿಡವಂದ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ಅಭಿಮಾನಿ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement
ಕನ್ನಡ ಶಾಲೆಗಳನ್ನು ಉಳಿಸಬೇಕು. ಸಾಮ್ರಾಟ್ ಅಶೋಕನ ಕಾಲದಿಂದಲೂ ರಾಜ್ಯದಲ್ಲಿ ಸುಭೀಕ್ಷತೆಯೊಂದಿಗೆ ಪರಿಸರ ಪ್ರಜ್ಞೆ ಉಳಿಸಿ ಬೆಳೆಸುವುದನ್ನು ಅನುಸರಿಸುತ್ತಿರುವ ಹಾಗೂ ಇದೇ ಹಾದಿಯಲ್ಲಿ ಕನ್ನಡಾಭಿಮಾನವನ್ನು ಕೇವಲ ಮಾತಿನಲ್ಲಿ ಹೇಳುವದಕ್ಕಿಂತ, ದಿನನಿತ್ಯದ ಮನೆ-ಮನ ಕನ್ನಡವಾಗಬೇಕು. ರಾಜಧಾನಿ ಬೆಂಗಳೂರಿನಲ್ಲೆ ಕನ್ನಡಿಗರ ಸಂಖ್ಯೆ ಕುಗ್ಗುತ್ತಿರುವುದು ಆತಂಕಕಾರಿ. ದೇಶದಲ್ಲಿ ಕೇಂದ್ರಡಾಳಿತ ಪ್ರದೇಶಗಳಂತೆ ರಾಜ್ಯದಲ್ಲೂ ಜಿಲ್ಲಾವಾರು ವಿಶೇಷ ಪ್ರಾತಿನಿಧ್ಯ ನೀಡಬೇಕು ಎಂದರು.
ಗಣ್ಯರಿಗೆ, ರೈತ ದಿನಾಚರಣೆ ನಿಮಿತ್ತ ರೈತರಿಗೆ ಹಾಗೂ ಮಾಜಿ ಸೈನಿಕ ಗೋವಿಂದಪ್ಪ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಈ ವೇಳೆ ಸೋಂಪುರ ಗ್ರಾಪಂ ಉಪಾಧ್ಯಕ್ಷೆ ಇಂದ್ರಮ್ಮ, ನಿಡವಂದ ಶಿವರುದ್ರಪ್ಪ, ಗ್ರಾಪಂ ಸದಸ್ಯ ತೀರ್ಥ ಪ್ರಸಾದ್, ಕರವೇ ಅಧ್ಯಕ್ಷ ಯುವರಾಜ್, ಎನ್.ಭೋಜರಾಜ್, ವಿನಯ್, ದಾಮೇಗೌಡ, ಸಿದ್ದು, ಭಾರತೀಪುರ ಶ್ರೀನಿವಾಸ್, ವಿಎಸ್ಎಸ್ಎನ್ಅಧ್ಯಕ್ಷ ವೆಂಕಟೇಶ್, ಅರ್ಚಕ ಕುಮಾರಸ್ವಾಮಿ, ನಿಡವಂದ ಗ್ರಾಪಂ ಸದಸ್ಯರಾದ ಪುರುಷೋತ್ತಮ್, ಜಗದೀಶ್, ಆನಂದಕುಮಾರ್, ಕುಮಾರ್ ಗ್ರಾಮಸ್ಥರಾದ ಎಂ.ರವಿ, ಶಿವಕುಮಾರ್, ಬಿ. ಪ್ರಕಾಶ್, ಹರೀಶ್ ಕುಮಾರ್ ಉಪಸ್ಥಿತರಿದ್ದರು.