Advertisement

ನಾವು ಇನ್ನೂ ಶಿವಸೇನೆಯಲ್ಲಿದ್ದೇವೆ,ಯಾರ ಬೆನ್ನಿಗೂ ಚೂರಿ ಹಾಕಿಲ್ಲ :ಕೇಸರ್ಕರ್

03:45 PM Jun 30, 2022 | Team Udayavani |

ಪಣಜಿ: ನಾವು ಠಾಕ್ರೆ ಕುಟುಂಬದ ವಿರುದ್ಧ ಅಲ್ಲ.ಉದ್ಧವ್ ಠಾಕ್ರೆ ಅವರು ಎಂವಿಎ ಜೊತೆಗಿನ ಮೈತ್ರಿಯನ್ನು ಮುರಿದರೆ ಅವರೊಂದಿಗೆ ಮಾತನಾಡಲು ನಾವು ಸಿದ್ಧರಿದ್ದೇವೆ ಎಂದು ಬಂಡಾಯ ಶಿವಸೇನೆ ಶಾಸಕರ ತಂಡದ ವಕ್ತಾರ ಶಾಸಕ ದೀಪಕ್ ಕೇಸರ್ಕರ್ ಹೇಳಿಕೆ ನೀಡಿದ್ದಾರೆ.

Advertisement

ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಠಾಕ್ರೆ ಅವರು ಇನ್ನೂ ಎಂವಿಎ ಯಲ್ಲೇ ಇದ್ದಾರೆ. ನಾವು ಠಾಕ್ರೆ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿಲ್ಲ. ಠಾಕ್ರೆ ಅವರ ಬಗ್ಗೆ ನಮಗೆ ಇನ್ನೂ ಗೌರವವಿದೆ ಎಂದರು.

ನಿನ್ನೆ ಸಿಎಂ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದರು. ಅವರನ್ನು ತೆಗೆದುಹಾಕುವುದು ನಮ್ಮ ಉದ್ದೇಶವಲ್ಲವಾದ್ದರಿಂದ ನಾವು ಯಾವುದೇ ರೀತಿಯ ಆಚರಣೆಯಲ್ಲಿ ತೊಡಗಿಲ್ಲ. ನಾವು ಇನ್ನೂ ಶಿವಸೇನೆಯಲ್ಲಿದ್ದೇವೆ ಮತ್ತು ಉದ್ಧವ್ ಠಾಕ್ರೆ ಅವರನ್ನು ನೋಯಿಸುವುದು ಮತ್ತು ಅಗೌರವಿಸುವುದು ನಮ್ಮ ಉದ್ದೇಶವಲ್ಲ ಎಂದರು.

ಏಕನಾಥ್ ಶಿಂಧೆ ಮುಂಬಯಿಗೆ ತೆರಳಿದ್ದಾರೆ. ಯಾವುದೇ ನಿರ್ಧಾರ ಕೈಗೊಂಡರೂ ಅದು ರಾಜ್ಯದ ಅಭಿವೃದ್ಧಿಗೆ ಎಂದು ಹೇಳಿದ್ದಾರೆ.ನಾವು ಯಾರ ಬೆನ್ನಿಗೂ ಚೂರಿ ಹಾಕಿಲ್ಲ, ಸಂಜಯ್ ರಾವುತ್ ನೀಡಿರುವಂತಹ ಹೇಳಿಕೆಗಳು ಜನರ ಅಸಮಾಧಾನಕ್ಕೆ ಕಾರಣವಾಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next