Advertisement

“ವಿಶ್ವಕಪ್‌ನಲ್ಲಿ ಒತ್ತಡ ನಿಭಾಯಿಸುವುದು ಮುಖ್ಯ’

10:01 AM Jan 24, 2020 | Team Udayavani |

ಮುಂಬಯಿ: ಆಸ್ಟ್ರೇಲಿಯ ದಲ್ಲಿ ನಡೆಯಲಿರುವ ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿ ಯಾಗುವುದು ಮುಖ್ಯ ಎಂಬುದಾಗಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹೇಳಿದ್ದಾರೆ. ಗುರುವಾರ ಆಸ್ಟ್ರೇಲಿಯಕ್ಕೆ ಹೊರಡುವ ಮುನ್ನ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

“ಕಳೆದೆರಡು ವಿಶ್ವಕಪ್‌ಗ್ಳಲ್ಲಿ ನಮ್ಮ ಪ್ರದರ್ಶನ ಉತ್ತಮ ಮಟ್ಟದಲ್ಲಿತ್ತು. ಆದರೆ ಒತ್ತಡವನ್ನು ನಿಭಾಯಿಸುವಲ್ಲಿ ವಿಫ‌ಲರಾದೆವು. ಈ ಬಾರಿ ಇಂಥ ಸಂಕಟ ಮರುಕಳಿಸಬಾರದು’ ಎಂದು ಕೌರ್‌ ಹೇಳಿದರು. ಕಳೆದ ಸಲ ಸೆಮಿಫೈನಲ್‌ನಲ್ಲಿ ಸೋತ ಭಾರತ, ಇದಕ್ಕೂ ಹಿಂದಿನ ವಿಶ್ವಕಪ್‌ನಲ್ಲಿ ರನ್ನರ್‌ ಅಪ್‌ ಆಗಿತ್ತು.

ಫೆಬ್ರವರಿ 21ರಿಂದ ಮಾರ್ಚ್‌ 8ರ ತನಕ ನಡೆಯಲಿರುವ ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಭಾರತ ತಂಡ ಆತಿಥೇಯ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ತಂಡಗಳನ್ನೊಳಗೊಂಡ ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಗ್ರೂಪ್‌ ಹಂತದಲ್ಲಿ ಭಾರತ ತಂಡ ಆಸ್ಟ್ರೇಲಿಯ, ಬಾಂಗ್ಲಾದೇಶ, ಕಿವೀಸ್‌, ಲಂಕಾ ಸವಾಲನ್ನು ಎದುರಿಸಲಿದೆ.

ಕಳೆದೆರಡು ವಿಶ್ವಕಪ್‌ಗ್ಳಲ್ಲಿ ನಮ್ಮ ಪ್ರದರ್ಶನ ಉತ್ತಮ ಮಟ್ಟದಲ್ಲಿತ್ತು. ಆದರೆ ಒತ್ತಡವನ್ನು ನಿಭಾಯಿಸುವಲ್ಲಿ ವಿಫ‌ಲರಾದೆವು. ಈ ಬಾರಿ ಇಂಥ ಸಂಕಟ ಮರುಕಳಿಸಬಾರದು.
-ಹರ್ಮನ್‌ಪ್ರೀತ್‌ ಕೌರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next