Advertisement

ಬೆಳ್ಮಣ್‌ನಲ್ಲಿ ಹಕ್ಕು ಪತ್ರ ವಿತರಣೆ

03:45 AM Jul 03, 2017 | |

ಬೆಳ್ಮಣ್‌: ಕಾರ್ಕಳ ತಾಲೂಕಿನಾದ್ಯಂತ ಬಹುತೇಕ ಹಕ್ಕು ಪತ್ರ ವಂಚಿತ ಮನೆಗಳಿಗೆ 94 ಸಿಯ ಮೂಲಕ ಅರ್ಜಿ ಸಲ್ಲಿಸಿದವರಿಗೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಪತ್ರ ವಿತರಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿಯೂ ಕಾನೂನುಬದ್ಧವಾಗಿ ನಿರಂತರ ಈ  ಪ್ರಕ್ರಿಯೆ ನಡೆಯಲಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಅವರು  ಶುಕ್ರವಾರ ಬೆಳ್ಮಣ್‌ ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ಆರ್ಹ ಅರ್ಜಿದಾರರಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.

ಬೆಳ್ಮಣ್‌ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ನಂದಳಿಕೆ, ಮುಂಡ್ಕೂರು ಇನ್ನಾ, ಬೆಳ್ಮಣ್‌ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು.

ಜಿಲ್ಲಾ ಪಂಚಾಯತ್‌ ಸದಸ್ಯೆ ರೇಶ್ಮಾ ಉದಯ್‌ ಕುಮಾರ್‌ ಶೆಟ್ಟಿ, ತಾಲೂಕು ಪಂಚಾಯತ್‌ ಸದಸ್ಯರಾದ ಪುಷ್ಪಾ ಸತೀಶ್‌ ಪೂಜಾರಿ, ಆಶಾದೇವೇಂದ್ರ ಶೆಟ್ಟಿ, ಎ.ಪಿ.ಎಂ.ಸಿ. ಸದಸ್ಯ ಮೋಹನ್‌ದಾಸ್‌ ಶೆಟ್ಟಿ,  ಬೆಳ್ಮಣ್‌ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಮಲ್ಲಿಕಾ ರಾವ್‌, ಉಪಾಧ್ಯಕ್ಷ  ವಿಜಯ್‌ ಕುಮಾರ್‌, ಗ್ರಾಮಕರಣಿಕರಾದ ಆನಂದ್‌, ಬಸವರಾಜ್‌ ಮೊದಲಾದವರು ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next