Advertisement

ಅಲ್ಪಸಂಖ್ಯಾತರ ಗುರುತಿಸಲು ಮಾರ್ಗಸೂಚಿ ನೀಡಿ

08:47 PM Jun 04, 2022 | Team Udayavani |

ನವದೆಹಲಿ: ದೇಶದ ಜಿಲ್ಲಾ ಮಟ್ಟಗಳಲ್ಲಿಯೂ ಅಲ್ಪಸಂಖ್ಯಾತರನ್ನು ಗುರುತಿಸುವಂತೆ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಪಸಂಖ್ಯಾತ ಎಂಬ ಶಬ್ದವನ್ನು ಸೂಕ್ತವಾಗಿ ವ್ಯಾಖ್ಯಾನಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರಿಕೆ ಮಾಡಿಕೊಂಡು, ಸುಪ್ರೀಂಕೋರ್ಟ್‌ನಲ್ಲಿ ಉತ್ತರ ಪ್ರದೇಶದ ಮಥುರಾ ನಿವಾಸಿ ದೇವಕಿನಂದನ್‌ ಠಾಕೂರ್‌ ಎಂಬುವರು ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

Advertisement

ಸದ್ಯ ಅಲ್ಪಸಂಖ್ಯಾತರು ಎಂದು ವ್ಯಾಖ್ಯಾನ ಮಾಡಿರುವ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆಯಲ್ಲಿನ ಅಂಶದ ಬಗ್ಗೆಯೂ ಅವರು ತಕರಾರು ತೆಗೆದಿದ್ದಾರೆ. ಈ ನಿಟ್ಟಿನಲ್ಲಿ 1993 ಅ.23ರಂದು ಅಂದಿನ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಕಾನೂನು ಬಾಹಿರ ಎಂದು ವಾದಿಸಿದ್ದಾರೆ.

ಅಲ್ಪಸಂಖ್ಯಾತರು ಎಂಬುದಕ್ಕೆ ವ್ಯಾಖ್ಯಾನ ಬೇಕು
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆಯ ಸೆಕ್ಷನ್‌ 2 ಸಿಯಲ್ಲಿ ಉಲ್ಲೇಖವಾಗಿರುವ ಅಂಶ ಸರಿಯಾಗಿಲ್ಲ ಮತ್ತು ಅದನ್ನು ರದ್ದುಗೊಳಿಸಬೇಕು. 2 ಸಿಯಲ್ಲಿ ಉಲ್ಲೇಖೀಸಿರುವಂತೆ ಕೇವಲ ಮುಸ್ಲಿಂ, ಕ್ರಿಶ್ಚಿಯನ್‌, ಸಿಖ್‌, ಬೌದ್ಧ ಮತ್ತು ಪಾರ್ಸಿಗಳನ್ನು ಮಾತ್ರ ದೇಶದಲ್ಲಿ ಅಲ್ಪಸಂಖ್ಯಾತರು ಎಂದು ಘೋಷಣೆ ಮಾಡಿರುವುದೂ ಸರಿಯಾಗಿಲ್ಲ. ಈ ಅಂಶ ಸಂವಿಧಾನದ 14, 15, 21, 29 ಮತ್ತು 30ನೇ ವಿಧಿಗಳ ಸ್ಪಷ್ಟ ಉಲ್ಲಂಘನೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next