Advertisement

Mumbai; ಉದ್ಧವ್‌ ಬಣದ ಅಭ್ಯರ್ಥಿ ಅನಿಲ್‌ ದೇಸಾಯಿ ರ್ಯಾಲಿಯಲ್ಲಿ ಇಸ್ಲಾಮಿಕ್‌ ಧ್ವಜ ಹಾರಾಟ?

10:02 PM May 14, 2024 | Team Udayavani |

ಮುಂಬೈ:  ಮುಂಬೈ ದಕ್ಷಿಣ ಮದ್ಯ ಕ್ಷೇತ್ರದ ಲೋಕಸಭಾ ಕ್ಷೇತದ ಅಭ್ಯರ್ಥಿ ಅನಿಲ್‌ ದೇಸಾಯಿ ರ್ಯಾಲಿಯಲ್ಲಿ ಇಸ್ಲಾಮಿಕ್‌ ಧ್ವಜ ಹಾರಾಟ ನಡೆದಿದೆ ಎಂದು ಆರೋಪಿಸಲಾಗಿದೆ.

Advertisement

ಉದ್ಧವ್‌ ಠಾಕ್ರೆ ಬಣದ ಶಿವಸೇನೆಯ ಅಭ್ಯರ್ಥಿಯಾಗಿರುವ ಅವರ ಪರ ಮುಂಬೈನ ಚೆಂಬೂರ್‌ನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಘಟನೆಯ ಫೋಟೋ ಮತ್ತು ವಿಡಿಯೋ ವೈರಲ್‌ ಆಗಿದೆ.

ಜಾಲತಾಣಗಳಲ್ಲಿ ಶಿವಸೇನೆ ಉದ್ಧವ್‌ ಬಣ ಶಿವಸೇನೆ ತನ್ನ ಸಂಸ್ಥಾಪಕ ಬಾಳಾಸಾಹೇಬ್‌ ಠಾಕ್ರೆ ಅವರ ತತ್ವಗಳಿಗೆ ಬದ್ಧವಾಗಿದೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಬಾಳಾಸಾಹೇಬ್‌ ಠಾಕ್ರೆ ಅವರ ಹಿಂದುತ್ವ, ರಾಷ್ಟ್ರೀಯತೆ ಸಿದ್ಧಾಂತಗಳು ಕಾಣುತ್ತಿಲ್ಲ. ಉದ್ಧವ್‌ ಠಾಕರೆ ಹಾದಿ ತಪ್ಪಿದ್ದು, ಮಹಾರಾಷ್ಟ್ರದ ಒವೈಸಿಯಾಗಲು ಹೊರಟಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next