Advertisement

ಪ್ರವಾದಿ ಅವಮಾನಕ್ಕೆ ಪ್ರತೀಕಾರ:ಕಾಬೂಲ್ ಗುರುದ್ವಾರ ದಾಳಿಯ ಹೊಣೆ ಹೊತ್ತ ಐಸಿಸ್

04:19 PM Jun 19, 2022 | Team Udayavani |

ಕಾಬೂಲ್: ಕಾರ್ಟೆ ಪರ್ವಾನ್ ಗುರುದ್ವಾರ ದಾಳಿಯ ಹೊಣೆಯನ್ನು ಖೊರಾಸನ್ ಪ್ರಾಂತ್ಯ ದ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಭಾನುವಾರ ಹೊತ್ತುಕೊಂಡಿದೆ.

Advertisement

ಐಎಸ್‌ಕೆಪಿ ದಾಳಿಯ ಹೊಣೆ ಹೊತ್ತುಕೊಂಡು ಹೇಳಿಕೆ ಬಿಡುಗಡೆ ಮಾಡಿದ್ದು, `ಅಬು ಮುಹಮ್ಮದ್ ಅಲ್ ತಾಜಿಕಿ~ ಮೂರು ಗಂಟೆಗಳ ಕಾಲ ದಾಳಿ ನಡೆಸಿದ್ದು, ಸಬ್‌ಮಷಿನ್ ಗನ್‌ಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳ ಜೊತೆಗೆ, ನಾಲ್ಕು ಐಇಡಿಗಳು ಮತ್ತು ಕಾರ್ ಬಾಂಬ್‌ಗಳನ್ನು ಸಹ ದಾಳಿಯಲ್ಲಿ ಬಳಸಲಾಗಿದೆ ಎಂದು ಗುಂಪು ಹೇಳಿಕೊಂಡಿದೆ.

ದಾಳಿಯಲ್ಲಿ ಸುಮಾರು 50 ಹಿಂದೂ, ಸಿಖ್ಖರು ಮತ್ತು ತಾಲಿಬಾನ್ ಸದಸ್ಯರು ಕೊಲ್ಲಲ್ಪಟ್ಟರು ಮತ್ತು ಭಾರತೀಯ ರಾಜಕಾರಣಿಯೊಬ್ಬರು ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ್ದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಲಾಯಿತು ಎಂದು ಅದು ಹೇಳಿದೆ. ಆದರೆ ಶನಿವಾರ ನಡೆದ ದಾಳಿಯಲ್ಲಿ ಇಬ್ಬರು ಮಾತ್ರ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next