Advertisement

ಮುಸ್ಲಿಮರು ವಾಸಿಸುವ ಪ್ರದೇಶ ದೇಶದ ಭಾಗವಲ್ಲವೇ?: ಸಚಿವ ಆರಗ ಜ್ಞಾನೇಂದ್ರ

11:44 PM Aug 16, 2022 | Team Udayavani |

ಶಿವಮೊಗ್ಗ: ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಸಾವರ್ಕರ್‌ ಭಾವಚಿತ್ರ ಹಾಕುವಂತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮುಸ್ಲಿಮರು ವಾಸಿಸುವ ಬಡಾವಣೆಗಳು ಈ ದೇಶದ ಭಾಗವಲ್ಲವೇ? ಸಾವರ್ಕರ್‌ ಫೋಟೋ ಹಾಕಲು ಈ ದೇಶದ ಯಾವುದಾದರೂ ಕಡೆಯಲ್ಲಿ ನಿಷೇಧ ವಿಧಿಸಲಾಗಿದೆಯೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಇಷ್ಟು ವರ್ಷ ರಾಜ್ಯಭಾರ ನಡೆಸಿದ್ದಾರೆ. ಅವರು ಹೀಗೆ ಮಾತನಾಡುವುದು ಪ್ರಚೋದನೆ ಕೊಟ್ಟ ಹಾಗೆ ಆಗಲಿದೆ. ತುಮಕೂರಿನಲ್ಲಿ ಸಾವರ್ಕರ್‌ ಫ್ಲೆಕ್ಸ್‌ ಹರಿದು ಹಾಕಿದ್ದಾರೆ. ಮಂಗಳೂರಿನಲ್ಲಿ ಸಾವರ್ಕರ್‌ ಫ್ಲೆಕ್ಸ್‌ ವಿಚಾರದಲ್ಲಿ ಅಡ್ಡಿಪಡಿಸಲಾಗಿದೆ.

ಸಾವರ್ಕರ್‌ ಎರಡು ಬಾರಿ ಕರಿ ನೀರಿನ ಶಿಕ್ಷೆ ಅನುಭವಿಸಿದ್ದಾರೆ. ಹಾಗಿದ್ದಾಗ ಸಾವರ್ಕರ್‌ ಫೋಟೋ ಹಾಕುವುದು ಬೇಡ ಎಂದು ಹೇಳಲು ಇವರು ಯಾರು? ಸಾವರ್ಕರ್‌ ಫೋಟೋ ವಿವಾದದ ಬಳಿಕ ಶಿವಮೊಗ್ಗ ನಗರದಲ್ಲಿ ಶಾಂತಿಯುತ ವಾತಾವರಣವಿದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.

ಎಡಿಜಿಪಿ ಅಲೋಕ್‌ ಕುಮಾರ್‌, ದಾವಣಗೆರೆ ವಲಯದ ಐಜಿಪಿ ಸೇರಿ ಹಿರಿಯ ಅ ಧಿಕಾರಿಗಳು ಶಿವಮೊಗ್ಗದಲ್ಲಿ ಇದ್ದು ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next