Advertisement

ಭಾಗವತ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾ? ಓವೈಸಿ ಪ್ರಶ್ನೆ

05:57 PM Dec 04, 2017 | Team Udayavani |

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರಿಷ್ಠ ಮೋಹನ್ ಭಾಗವತ್ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರೇ, ಅವರು ಯಾರು ? ಎಂದು ಎಎನ್ಐ ನ್ಯೂಸ್ ಏಜೆನ್ಸಿ ಜತೆ ಮಾತನಾಡುತ್ತ  ಆಲ್ ಇಂಡಿಯಾ ಮಜ್ಲಿದ್ ಎ ಇತ್ತೆಹದುಲ್ ಮುಸ್ಲಿಮಿನ್ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.

Advertisement

ಅಯೋಧ್ಯೆಯಲ್ಲಿ ರಾಮ ಮಂದಿರ ಮಾತ್ರ ನಿರ್ಮಾಣವಾಗಲಿದೆ, ಅಲ್ಲಿ ಬೇರೆ ಏನೂ ನಿರ್ಮಾಣವಾಗಲು ಸಾಧ್ಯವಿಲ್ಲ ಎಂದು ಮೋಹನ ಭಾಗವತ್ ಅವರು ಉಡುಪಿಯ ಧರ್ಮ ಸಂಸದ್ ನಲ್ಲಿ ನೀಡಿರುವ ಹೇಳಿಕೆ ಕುರಿತ ಪ್ರಶ್ನೆಗೆ ಓವೈಸಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಮೋಹನ್ ಭಾಗವತ್ ಅವರು ಹೇಗೆ ಈ ಹೇಳಿಕೆ ನೀಡಿದರು ಎಂದು ಅಚ್ಚರಿ ವ್ಯಕ್ತಪಡಿಸಿದ ಓವೈಸಿ,  ಇದೊಂದು ವಿವಾದಿತ ಪ್ರಕರಣವಾಗಿದೆ. ಕೆಲವು  ಹಿಂದುಗಳ ಪ್ರಕಾರ ರಾಮನ ಜನ್ಮಭೂಮಿ ಸ್ಥಳ ಇದಾಗಿದೆ ಎಂದು ನಂಬುತ್ತಾರೆ, ಆದರೆ ಈ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದು, ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಹೇಳಲು ಮೋಹನ್ ಭಾಗವತ್ ಗೆ ಯಾವ ಅಧಿಕಾರವಿದೆ. ನಿಮ್ಮನ್ನು ನೀವೇ ಸುಪ್ರೀಂಕೋರ್ಟ್ ನ್ಯಾಯಾಧೀಶರು ಎಂದುಕೊಂಡಿದ್ದೀರಾ ಎಂದು ನೀವು(ಪತ್ರಕರ್ತ) ಅವರನ್ನು ಪ್ರಶ್ನಿಸಿ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next