Advertisement

ಪೆಸಿಫಿಕ್‌ ದ್ವೀಪ ರಾಷ್ಟ್ರ ವನುವಾತುವಲ್ಲಿ ನಿತ್ಯಾನಂದ ಠಿಕಾಣಿ?

10:09 AM Jan 25, 2020 | Hari Prasad |

ಹೊಸದಿಲ್ಲಿ: ದೇಶ ಬಿಟ್ಟು ಪರಾರಿಯಾಗಿರುವ ಬಿಡದಿಯ ನಿತ್ಯಾನಂದ ಸ್ವಾಮಿ ಪೆಸಿಫಿಕ್‌ ಸಾಗರ ವ್ಯಾಪ್ತಿಯಲ್ಲಿರುವ ವನುವಾತು ಎಂಬ ದ್ವೀಪ ರಾಷ್ಟ್ರದಲ್ಲಿ ಬೀಡು ಬಿಟ್ಟಿದ್ದಾನೆಂಬ ಗುಮಾನಿ ಇದೆ. ನಿತ್ಯಾನಂದ ಸ್ವಾಮಿಯ ನಿಕಟವರ್ತಿಗೆ ಕಳುಹಿಸಿದ ಇ-ಮೇಲ್‌ನಿಂದ ಈ ಅಂಶ ಬಹಿರಂಗವಾಗಿದೆ.

Advertisement

ಸ್ವಘೋಷಿತ ದೇವಮಾನವನ ಸಂಸ್ಥೆಗೆ ದೇಣಿಗೆಯನ್ನು ಹೇಗೆ ಕಳುಹಿಸಬಹುದು ಎಂದು ಕೇಳಿದ್ದಾಗ ವನುವಾತು ದ್ವೀಪ ರಾಷ್ಟ್ರದಲ್ಲಿರುವ ಖಾತೆಗೆ ವರ್ಗಾಯಿಸುವ ಬಗ್ಗೆ ನಿಕಟವರ್ತಿ ಸಲಹೆ ನೀಡಿದ್ದರು.

ವನುವಾತು ಎನ್ನುವುದು ತೆರಿಗೆ ಸ್ವರ್ಗ ರಾಷ್ಟ್ರವಾಗಿದ್ದು, ಇ-ಮೇಲ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಮೊತ್ತವನ್ನು ‘ಕೈಲಾಸ ಲಿಮಿಟೆಡ್‌’ ಎಂಬ ಹೆಸರಿನ ಖಾತೆಗೆ ಜಮೆ ಮಾಡುವಂತೆ ಸಲಹೆ ಮಾಡಲಾಗಿದೆ. ನ್ಯಾಷನಲ್‌ ಬ್ಯಾಂಕ್‌ ಆಫ್ ವನುವಾತುವಿನ ಪೋರ್ಟ್‌ ವಿಲ್ಲಾ ಎಂಬಲ್ಲಿರುವ ಶಾಖೆಯಲ್ಲಿ ಆತ ಖಾತೆಯನ್ನೂ ಹೊಂದಿದ್ದಾನೆ.

ಈ ಹೊಸ ಬೆಳವಣಿಗೆಯಿಂದ ಆತ ವನುವಾತುವಿನಲ್ಲಿಯೇ ಇದ್ದಾನೆಯೋ ಅಥವಾ ಅಲ್ಲಿ ಆತನ ವಹಿವಾಟುಗಳು ಮಾತ್ರ ಇವೆಯೋ ಎಂಬ ಪ್ರಶ್ನೆ ಮೂಡಿದ್ದು, ಸೂಕ್ತ ತನಿಖೆಯಿಂದ ಇದಕ್ಕೆಲ್ಲ ಉತ್ತರ ಸಿಗುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next