Advertisement

ಕುಮಾರಸ್ವಾಮಿಯವರೇನು ಎಲ್‌ ಕೆಜಿ ಮಗುವೇ : ಇಬ್ರಾಹಿಂ‌ ಆಕ್ರೋಶ

06:09 PM Jun 14, 2022 | Team Udayavani |

ಬೆಂಗಳೂರು: ಕಾಣೆಯಾಗಿದ್ದಾರೆ ಎಂದು ಹೇಳುವುದಕ್ಕೆ ಕುಮಾರಸ್ವಾಮಿಯವರೇನು ಎಲ್‌ ಕೆಜಿ ಮಗೂನಾ ? ಎಂದು ಜೆಡಿಎಸ್  ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸಾಮಾಜಿಕ ಜಾಲ ತಾಣದಲ್ಲಿ ತಿಥಿ ಕಾರ್ಡ್ ಬಳಕೆ ವಿಚಾರ ಸಂಬಂಧ ಮಾತನಾಡಿದ ಅವರು, ತಿಥಿ ಕಾರ್ಡ್ ಗಳನ್ನ ಪೋಸ್ಟ್ ಮಾಡಿರುವುದು ತಪ್ಪು.ಪದ ಬಳಕೆಯೂ ಸರಿಯಾಗಿರಬೇಕು.ಕಾಣೆಯಾಗಿದ್ದಾರೆ ಅಂದರೆ ಕುಮಾರಸ್ವಾಮಿ ಎಲ್ ಕೆಜಿ ಮಗೂನಾ ? ಎಂದು ಪ್ರಶ್ನಿಸಿದರು.

ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಸುತ್ತಾಡಿದ್ದಾರೆ. ಹಾಗಾಗಿ ವಿಶ್ರಾಂತಿಗೆ ತೆರಳಿದ್ದಾರೆ.ಕುಮಾರಸ್ವಾಮಿ ಮೇಲಿನ ಪ್ರೀತಿಗೆ ಕೆಲವರು ಸಾಮಾಜಿಕ ಜಾಲತಾಣಲದಲ್ಲಿ ಹಾಕುತ್ತಿದ್ದಾರೆ. ಕುಮಾರಸ್ವಾಮಿಗೆ ಗಂಟಲು ನೋವು ಕಾಣಿಸಿಕೊಂಡಿದೆ.ಇಂದು ಸಂಜೆ ಅವರು ಬರುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಎಂಬತ್ತು ವರ್ಷದ ಗೊಡ್ಡು ಮೈತ್ರಿಗೆ ಬನ್ನಿ ಅಂತಾ ಇವರಿಗೆ ಯಾರು ಹೇಳಿದ್ದಾರೆ.ಸರ್ಕಾರ ಮಾಡಲು ದೇವೇಗೌಡರ ಮನೆಗೆ ಹೋದವರು ಯಾರು ? ಈಗಾಗಲೇ ಕಾಂಗ್ರೆಸ್ ನವರು ಬಿಜೆಪಿ ಜೊತೆ ಬಸ್ ಸ್ಟಾಂಡ್ ನಲ್ಲಿ ಸಂಬಂಧ ಬೆಳೆಸಿದ್ದಾರೆ. ಬಸ್ ಸ್ಟಾಂಡ್ ಜನರ ಬಗ್ಗೆ ಏನು ಹೇಳಲಿ ಎಂದು ವ್ಯಂಗ್ಯವಾಡಿದರು.

ಮೊದಲು ಎಂ.ಬಿ ಪಾಟೀಲ್ ಈ ಬಾರಿ ಗೆದ್ದು ತೋರಿಸಲಿ.ಎಸ್.ಆರ್. ಪಾಟೀಲ್ ಏನು ಮಾಡುತ್ತಿದ್ದಾರೆ ಅನ್ನೋದನ್ನ ನೋಡಲಿ.ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಆ ಪಕ್ಷ 80 ಸ್ಥಾನಕ್ಕೆ ಕುಸಿಯಲಿಲ್ಲವೇ ?ಸ್ವತಃ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು. ಅಧಿಕಾರ ಇದ್ದಾಗಲೇ ಇವರು ಹೆಚ್ಚು ಸ್ಥಾನ ಗೆಲ್ಲಲು ಆಗಲಿಲ್ಲ. ಈಗ ಅಧಿಕಾರ ಇಲ್ಲದೇ ಚಿತ್ರಾನ್ನ ಆಗಿ ಬಿಟ್ಟಿದ್ದಾರೆ.ಇಡಿ, ಐಟಿಗಾಗಿ ಕೋರ್ಟ್ ಅಂತಾ ಸುತ್ತು ಹೊಡೆಯುತ್ತಿದ್ದಾರೆ ಎಂದು ಟೀಕಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next