Advertisement

ಕೇಂದ್ರ ನೀಡಿದ ಅನುದಾನ ನುಂಗಿದ್ದನ್ನು ಪ್ರಶ್ನಿಸಿದ್ರೆ ತಪ್ಪೆ? 

10:50 AM Jan 28, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಕನ್ನಡಿಗರಿಗಾಗಿ ಸಾಕಷ್ಟು ಅನುದಾನ ನೀಡಿದ್ದರೂ ಅದನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ನುಂಗಿ ಜನರಿಗೆ ಮೋಸ ಮಾಡಿರುವುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಮುಖ್ಯಮಂತ್ರಿಗಳಲ್ಲಿ ಕೇಂದ್ರದ ಅನುದಾನದ ಬಗ್ಗೆ ಲೆಕ್ಕ ಕೇಳಿದ್ದಾರೆ.

Advertisement

ಇದನ್ನು “ಕನ್ನಡಿಗನಾದ ನನ್ನನ್ನು ಬೈಯ್ದರೆ ರಾಜ್ಯದ ಜನ ಸುಮ್ಮನಿರುವುದಿಲ್ಲ’ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಹೇಡಿತನದ್ದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

ಎಲ್ಲಾ ರಾಜ್ಯಗಳಿಗೆ ನೀಡಿದಂತೆ ಕರ್ನಾಟಕಕ್ಕೂ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಅಮಿತ್‌ ಶಾ ಅವರು ಈ ಅನುದಾನವನ್ನು ಹೇಗೆ ಸದುಪಯೋಗಪಡಿಸಿದ್ದೀರಿ ಎಂಬ ಲೆಕ್ಕವನ್ನು ಜನರಿಗೆ ತಿಳಿಸಿ ಎಂದು ಕೇಳಿದ್ದಾರೆ. ಕನ್ನಡಿಗರ ಅಭಿವೃದಿಟಛಿಗಾಗಿ ಕೇಂದ್ರ ನೀಡಿದ ಅನುದಾನವನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡ ಬಗ್ಗೆ ಅಮಿತ್‌ ಶಾ ಪ್ರಶ್ನಿಸಿದರೆ, ನನ್ನನ್ನು ಬೈದರೆ ಕನ್ನಡಿಗರು ಸುಮ್ಮನಿರುವುದಿಲ್ಲ ಎಂದು ಹೇಳಿರುವುದರಲ್ಲಿ ಏನು ನ್ಯಾಯವಿದೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next