Advertisement

ಕೃಷಿ ಪತ್ತಿನ ಸಹಕಾರಿಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ಕೇಸ್ ದಾಖಲಿಸುವಂತೆ ಒತ್ತಾಯ

07:27 PM Jan 17, 2022 | Team Udayavani |

ಗಂಗಾವತಿ: ಮುಸ್ಟೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸುಮಾರು 1,17 ಕೋಟಿ ರೂ.ಗಳ ಅವ್ಯವಹಾರ ಮಾಡಿರುವ ಸಿಇಒ ಹಾಗೂ ಇತರೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಸಹಕಾರ ಖಾತೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಸಿ.ಕೆ.ಮರಿಸ್ವಾಮಿ ಮಾತನಾಡಿ, ಸಹಕಾರಿಯಲ್ಲಿ ಆದ ಅವ್ಯವಹಾರ ಬೆಳಕಿಗೆ ಬಂದು 3-4 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಹಕಾರಿಯ ಮೇಲಾಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಭ್ರಷ್ಠಾಚಾರದಲ್ಲಿ  ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಬಗ್ಗೆ ಶಂಕೆಯಿದೆ. ಸಹಕಾರಿ ಸಚಿವರು  ಕೂಡಲೇ ಈ ಸಹಕಾರಿಯ ಎಲ್ಲಾ ವ್ಯವಹಾರಗಳನ್ನು ತನಿಖೆಗೊಳಪಡಿಸಿ, ಅವ್ಯವಹಾರ ನಡೆದ ಬಗ್ಗೆ ಇಲಾಖೆಯ ಉನ್ನತಾಧಿಕಾರಿಗಳಿಂದ  ಪರಿಶೀಲಿಸಿ, ಅವ್ಯವಹಾರ ನಡೆಸಿದ ಸಿಬ್ಬಂದಿ ಹಾಗೂ ಅವ್ಯವಹಾರವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ಸಹಕಾರ ಇಲಾಖೆ ನಿರ್ಲಕ್ಷಿಸಿದಲ್ಲಿ ಮುಂದಿನ ದಿನಗಳಲ್ಲಿ  ಸಂಘಟನೆ ಉಗ್ರ ಪ್ರತಿಭಟನೆಗಳನ್ನು ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭಸಲ್ಲಿ ಸಮಿತಿಯ ಗಂಗಾವತಿ ತಾಲೂಕ ಅಧ್ಯಕ್ಷ ಹನುಮಂತ ಮೂಳೆ, ಸಮಿತಿಯ ಬಸವರಾಜ ಮಾಳೇಮನಿ, ಓಂಕಾರೆಪ್ಪ ಈಳಿಗನೂರು, ತಿಪ್ಪಣ್ಣ ಈಳಿಗನೂರು, ನಾಗರಾಜ ಭಜಂತ್ರಿ,  ಹುಲಿಗೇಶ ಕೊಜ್ಜಿ, ಕೃಷ್ಣ ಅಕ್ಕಿರೊಟ್ಟಿ, ರಾಮಣ್ಣ  ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next