Advertisement

IRCTC ಹಗರಣ: ಜ.28ರ ವರೆಗೆ ಲಾಲು, ಇತರರ ಜಾಮೀನು ವಿಸ್ತರಣೆ

06:21 AM Jan 19, 2019 | Team Udayavani |

ಹೊಸದಿಲ್ಲಿ : ಐಆರ್‌ಸಿಟಿಸಿ ಯ ಎರಡು ಹಗರಣಗಳಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ಗೆ ದಿಲ್ಲಿ ನ್ಯಾಯಾಲಯ ಜನವರಿ 28ರ ವರೆಗೆ ಮಧ್ಯಾವಧಿ ಜಾಮೀನು ವಿಸ್ತರಿಸಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಈ ಕೇಸುಗಳನ್ನು ದಾಖಲಿಸಿತ್ತು.

Advertisement

ವಿಶೇಷ ನ್ಯಾಯಾಧೀಶ ಅರುಣ್‌ ಭಾರದ್ವಾಜ್‌ ಅವರು ಇದೇ ವೇಳೆ ಲಾಲು ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್‌ ಅವರ ಮಧ್ಯಾವಧಿ ಜಾಮೀನನ್ನು ಕೂಡ ಜನವರಿ 28ರ ವರೆಗೆ ವಿಸ್ತರಿಸಿದರು. 

ಅಂತೆಯೇ ಜನವರಿ 28ರಂದು ನ್ಯಾಯಾಲಯವು ಲಾಲು ಪ್ರಸಾದ್‌ ಮತ್ತು ಇತರರ ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ಪ್ರಕಟಿಸಲಿದೆ. 

ಖಾಸಗಿ ಸಂಸ್ಥೆಯೊಂದಕ್ಕೆ  ಎರಡು ಐಆರ್‌ಸಿಟಿಸಿ ಹೊಟೇಲುಗಳ ನಿರ್ವಹಣಾ ಗುತ್ತಿಗೆಯನ್ನು ಅಕ್ರಮವಾಗಿ  ಮಂಜೂರು ಮಾಡಿರುವುದಕ್ಕೆ ಸಂಬಂಧಿಸಿ ಈ ಕೇಸುಗಳನ್ನು ಲಾಲು ಮತ್ತು ಇತರರ ವಿರುದ್ಧ ಸಿಬಿಐ, ಇಡಿ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next