Advertisement

ಸಾಗರ: ಅಬ್ಬರದ ಮಳೆ ಹಿನ್ನಲೆ; ತುಂಬಿ ಹರಿಯುತ್ತಿರುವ ಇರುವಕ್ಕಿ ಸೇತುವೆ

01:42 PM Aug 02, 2022 | Team Udayavani |

ಸಾಗರ: ತಾಲೂಕಿನ ಆನಂದಪುರ ಸಮೀಪದ ಇರುವಕ್ಕಿಯ ಸೇತುವೆಯ ಮೇಲೆ ಅಬ್ಬರದ ಮಳೆಯಿಂದಾಗಿ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು ಸೇತುವೆಯೇ ಮುಚ್ಚಿ ಹೋದಂತಾಗಿದೆ.

Advertisement

ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ಕರಡಿಮನೆ – ಇರುವಕ್ಕಿ ರಸ್ತೆ ಸಂಪರ್ಕ ಬಂದ್ ಆಗಿದೆ. ಸೇತುವೆಯ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ಸೇತುವೆಯ ಅಕ್ಕಪಕ್ಕ ಗುಂಡಿ ಬಿದ್ದಂತಾಗಿದೆ. ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ.

ಮಳೆಯ ಪ್ರಮಾಣ ಕಡಿಮೆಯಾಗದ ಹೊರತು ಸೇತುವೆ ಮೇಲೆ ನೀರು ಹರಿಯುವ ಪ್ರಮಾಣ ಕೂಡ ಕಡಿಮೆ ಯಾಗುವುದಿಲ್ಲ. ಗ್ರಾಮಸ್ಥರು ಇದೀಗ ಈ ರಸ್ತೆ ಸಂಪರ್ಕವನ್ನು ಬಿಟ್ಟು ಬೇರೊಂದು ದಾರಿಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೋಮವಾರದಿಂದಲೇ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಮಂಗಳವಾರ ಕೂಡ ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next