Advertisement

IPS ಅಧಿಕಾರಿಗೆ ಢಿಕ್ಕಿಯಾದ ಸಚಿವರ ಬೆಂಗಾವಲು ವಾಹನ; ವಿಡಿಯೋ

12:14 PM Mar 13, 2024 | Team Udayavani |

ಭದ್ರಾದ್ರಿ ಕೊತಗುಡೆಂ(ತೆಲಂಗಾಣ):  ಜಿಲ್ಲೆಯ ಎಎಸ್ಪಿಯಾಗಿ ನಿಯೋಜಿತರಾಗಿದ್ದ ಐಪಿಎಸ್ ಪಾರಿತೋಷ್ ಪಂಕಜ್ ಅವರು ಸಚಿವರೊಬ್ಬರ ಬೆಂಗಾವಲು ವಾಹನಕ್ಕೆ ಢಿಕ್ಕಿ ಹೊಡೆದು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.

Advertisement

ಸಚಿವ ಶ್ರೀಧರ್ ಬಾಬು ಅವರ ಭೇಟಿಯ ವೇಳೆ ಬೆಂಗಾವಲು ವಾಹನ ಕರ್ತವ್ಯ ನಿರತರಾಗಿದ್ದ ಪಾರಿತೋಷ್ ಪಂಕಜ್ ಅವರಿಗೆ ಹಿಂಬದಿಯಿಂದ ಢಿಕ್ಕಿಯಾದ ಪರಿಣಾಮ ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next