Advertisement

ಮುಂಬೈ ಬೌಲಿಂಗ್ ದಾಳಿಗೆ ಬೆಚ್ಚಿದ ಕೆಕೆಆರ್ : ರೋಹಿತ್ ಪಡೆಗೆ 149 ರ ಗುರಿ

09:08 PM Oct 16, 2020 | Suhan S |

ಅಬುಧಾಬಿ : ಮುಂಬೈ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಗಿಳಿದ ಕೆಕೆಆರ್ ಮುಂಬೈ  ಬೌಲಿಂಗ್ ದಾಳಿಗೆ 5 ವಿಕೆಟ್ ನಷ್ಟಕ್ಕೆ  148 ರ ಸಾಧಾರಣ ಮೊತ್ತ ಪೇರಿಸಿ 149 ರ ಸವಾಲನ್ನು ಮುಂಬೈ ಪಡೆಗೆ ನೀಡಿದೆ.

Advertisement

ಕೆಕೆಆರ್ ಪರ ಆರಂಭಿಕರಾಗಿ ದಾಂಡಿಗತನಕ್ಕೆ ಬಂದ ರಾಹುಲ್ ತ್ರಿಪಾಠಿ ಹಾಗೂ ಶುಭಮನ್ ಗಿಲ್ ನಿರೀಕ್ಷಿತ ಆರಂಭ ನೀಡದೆ ವಿಫಲರಾದರು. ರಾಹುಲ್ ತ್ರಿಪಾಠಿ 7 ರನ್ ಗಳಿಸಿ ಟ್ರೆಂಟ್ ಬೌಲ್ಟ್ ಎಸೆತಕ್ಕೆ  ಸೂರ್ಯ ಕುಮಾರ್ ಯಾದವ್ ಕೈಗೆ ಕ್ಯಾಚ್ ಕೊಟ್ಟು ನಿರ್ಮಿಸಿದರೆ, ಉತ್ತಮ ಆರಂಭ ಪಡೆದ ಶುಭ್ ಮನ್ ಗಿಲ್ 27 ರನ್ ಗಳಿಸಿ ರಾಹುಲ್ ಚಹಾರ್ ಎಸೆತಕ್ಕೆ ಪೋಲಾರ್ಡ್ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಹಾದಿ ಹಿಡದರು. ಬಳಿಕ ಬಂದ ನಿತೀಶ್ ರಾಣಾ ಹಾಗೂ ದಿನೇಶ್ ಕಾರ್ತಿಕ್ ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲದೆ ಔಟ್ ಆದರು. ರಸ್ಸೆಲ್  ನಿರೀಕ್ಷಿತ ಮಟ್ಟದಲ್ಲಿ ಬ್ಯಾಟ್ ಬೀಸದೆ ಬುಮ್ರಾ ಎಸೆತಕ್ಕೆ ಡಿಕಾಕ್ ಕೈಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.

ನಾಯಕ ಮಾರ್ಗನ್ ಹಾಗೂ ಪ್ಯಾಟ್ ಕಮ್ಮಿನ್ಸ್ ಜೊತೆಯಾಟ ತಂಡಕ್ಕೆ ಆಶದಾಯಕವಾಯಿತು. ಕೆಕೆಆರ್ ನಿಗದಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ 149 ರ ಸವಾಲನ್ನು ಮುಂಬೈ ಪಡೆಗೆ ನೀಡಿದೆ.

ಮುಂಬೂ ಪರ ಉತ್ತಮವಾಗಿ ಬೌಲ್ ಮಾಡಿದ ರಾಹುಲ್ ಚಹಾರ್ 4 ಓವರ್ ನಲ್ಲಿ 18 ರನ್ ಕೊಟ್ಟು 2 ಪ್ರಮುಖ ವಿಕೆಟ್ ಗಳನ್ನು ಪಡೆದು ಮಿಂಚಿದರು. ಟ್ರೆಂಟ್ ಬೌಲ್ಟ್, ನಾಥನ್ ಕೌಲ್ಟರ್-ನೈಲ್ ಹಾಗೂ  ಜಸ್ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next