Advertisement

IPL: ಧೋನಿಯ ಬಗ್ಗೆ ಜಡೇಜಾ ಟ್ವೀಟ್‌… ʻಮಾಹಿ ಭಾಯಿ…ನಿಮಗಾಗಿ..ʼ- ಏನಿದು?

08:27 PM May 30, 2023 | Team Udayavani |

ಚೆನ್ನೈ: ಅಂತೂ 2023ರ ಐಪಿಎಲ್‌ ಪಂದ್ಯಾಕೂಟಕ್ಕೆ ಅಧಿಕೃತ ತೆರೆ ಬಿದ್ದಾಗಿದೆ. ಗುಜರಾತ್‌ ಟೈಟಾನ್ಸ್‌ ವಿರುದ್ಧದ ಫೈನಲ್‌ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಅತ್ಯಮೂಲ್ಯ 10 ರನ್‌ ಬಾರಿಸುವ ಮೂಲಕ ಜಡೇಜಾ ಸಿಎಸ್‌ಕೆ ಪಾಲಿಗೆ ಹೀರೋ ಆಗಿಬಿಟ್ಟಿದ್ದರು.  ಅವರ ಈ ಫಿನಿಶಿಂಗ್‌ನಿಂದಾಗಿಯೇ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ಐಪಿಎಲ್‌ ಇತಿಹಾಸದ 5 ನೇ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

Advertisement

ಈ ಪಂದ್ಯದ ಬಳಿಕ ಈ ಕುರಿತು ಸಿಎಸ್‌ಕೆ ಆಲ್‌ರೌಂಡರ್‌ ಟ್ವೀಟ್‌ ಮಾಡಿದ್ದಾರೆ. ಅವರು ತಮ್ಮ ಭಾವನಾತ್ಮಕ ಪೋಸ್ಟ್‌ನಲ್ಲಿ ಧೋನಿಯ ಬಗ್ಗೆ ಮಾತನಾಡಿದ್ದಾರೆ. ಇದೀಗ ಧೋನಿಯ ಕುರಿತಾಗಿ ಜಡೇಜಾ ಮಾಡಿರುವ ಟ್ವೀಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ʻನಾವು ಇದನ್ನು ಮಾಡಿದ್ದು ಒಬ್ಬನೇ ಒಬ್ಬನಿಗಾಗಿ. ಎಂ.ಎಸ್‌ ಧೋನಿಗಾಗಿ. ಮಾಹಿ ಭಾಯಿ, ನಿಮಗಾಗಿಯಾದರೆ ಏನು ಬೇಕಾದರೂ..’ ಎಂಬುದಾಗಿ ಜಡೇಜಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಧೋನಿ ಮತ್ತು ಜಡೇಜಾ ನಡುವೆ ಎಲ್ಲವೂ ಅಂದುಕೊಂಡಷ್ಟು ಸರಿಯಾಗಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿರುವ ಮಧ್ಯೆಯೇ ಜಡೇಜಾ ಅವರು ಈ ಟ್ವೀಟ್‌ ಮಾಡಿದ್ದು ಅಭಿಮಾನಿಗಳನ್ನು ಫುಲ್‌ ಖುಷ್‌ ಮಾಡಿದೆ.

ಇದನ್ನೂ ಓದಿ: New Delhi: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ…

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next