Advertisement
ಮೇಲ್ನೋಟಕ್ಕೆ ಇದು ಲೆಕ್ಕದ ಭರ್ತಿಯ ಪಂದ್ಯ. ಆದರೆ ಗುಜರಾತ್ಗೆ ಮಹತ್ವದ್ದು. ಇನ್ನೂ 2 ಪಂದ್ಯಗಳು ಬಾಕಿ ಇರುವಾಗಲೇ ಪ್ಲೇ ಆಫ್ ಸುತ್ತಿಗೆ ಲಗ್ಗೆ ಹಾಕಿರುವ ಹಾರ್ದಿಕ್ ಪಾಂಡ್ಯ ಪಡೆಯ ಮುಂದಿನ ಗುರಿಯೆಂದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವುದು. ಉಳಿದೆರಡೂ ಪಂದ್ಯಗಳನ್ನು ಗೆದ್ದರೆ ಈ ಯೋಜನೆ ಸಾಕಾರಗೊಳ್ಳಲಿದೆ. ಆಗ ಗುಜರಾತ್ ಅಂಕ 22ಕ್ಕೆ ಏರಲಿದೆ. ಬೇರೆ ಯಾವುದೇ ತಂಡಕ್ಕೂ 20, 18 ಅಂಕಗಳ ಗಡಿ ದಾಟಲು ಸಾಧ್ಯವಿಲ್ಲ.
Related Articles
Advertisement
ಚೆನ್ನೈಗೆ ಪ್ರತಿಷ್ಠೆಯ ಪಂದ್ಯಹಾಲಿ ಚಾಂಪಿಯನ್ ಚೆನ್ನೈಯದ್ದು ಇದಕ್ಕೆ ತದ್ವಿರುದ್ಧ ಆಟ. ಕೆಲವು ಸ್ಟಾರ್ ಆಟಗಾರರು ದೂರಗೊಂಡ ಪರಿಣಾಮ ಹಾಗೂ ಅರ್ಧದಷ್ಟು ಮಂದಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರ್ಪಡಿಸದೇ ಇದ್ದುದರಿಂದ ಚೆನ್ನೈಗೆ ಈ ಗತಿ ಬಂದಿದೆ. ರವೀಂದ್ರ ಜಡೇಜ ನಾಯಕತ್ವದಲ್ಲಿ ವಿಫಲರಾದದ್ದು, ಈಗ ತಂಡದಿಂದ ಬೇರ್ಪಟ್ಟಿದ್ದೂ ತಂಡಕ್ಕೆ ಮಾರಕವಾಗಿ ಪರಿಣಮಿಸಿದೆ. ಈ ನಡುವೆ ಅಂಬಾಟಿ ರಾಯುಡು ಅವರ “ನಿವೃತ್ತಿ ಟ್ವೀಟ್’ ಕೂಡ ಸದ್ದು ಮಾಡಿದೆ. ಒಟ್ಟಾರೆ, ಚೆನ್ನೈ ತಂಡದಲ್ಲಿ ಯಾವುದೂ ಸರಿ ಇಲ್ಲ ಎಂಬುದು ಮಾತ್ರ ಸುಳ್ಳಲ್ಲ! ಮುಂಬೈ ಎದುರಿನ ಹಿಂದಿನ ಪಂದ್ಯವನ್ನು ಜಯಿಸಿದ್ದೇ ಆದಲ್ಲಿ ಚೆನ್ನೈಗೆ ಮುಂದುವರಿಯುವ ಕ್ಷೀಣ ಅವಕಾಶವೊಂದಿತ್ತು. ಧೋನಿ ಪಡೆ ಈ ಅವಕಾಶವನ್ನು ಕಳೆದುಕೊಂಡಿದೆ. ಅಗ್ರಸ್ಥಾನಿ ಗುಜರಾತ್ಗೆ ಸೋಲುಣಿಸಿ ಪ್ರತಿಷ್ಠೆ ಕಾಯ್ದುಕೊಳ್ಳುವುದೊಂದೇ ಉಳಿದಿರುವ ಮಾರ್ಗ. ಆಗ, ಮೊದಲ ಸುತ್ತಿನಲ್ಲಿ ಅನುಭವಿಸಿದ 3 ವಿಕೆಟ್ ಸೋಲಿಗೆ ಸೇಡನ್ನೂ ತೀರಿಸಿದಂತಾಗುತ್ತದೆ.