Advertisement

ಟೀಕೆಗೆ ವಿನಯ್‌ ತಿರುಗೇಟು

07:00 AM Apr 12, 2018 | |

ಚೆನ್ನೈ: ಕೆಕೆಆರ್‌ ವೇಗದ ಬೌಲರ್‌, ರಾಜ್ಯದ ವಿನಯ್‌ ಕುಮಾರ್‌ ಈಗ ಅಭಿಮಾನಿಗಳ ಟೀಕಾ ಪ್ರಹಾರಕ್ಕೆ ಸಿಕ್ಕಿದ್ದಾರೆ. ಆದರೆ ಅವರು ಅದಕ್ಕೆ ಹೆದರಿ ಕುಳಿತಿಲ್ಲ. ಬದಲಿಗೆ ಟ್ವೀಟ್‌ ಮೂಲಕ ಅದಕ್ಕೆ ತಿರುಗೇಟು ನೀಡಿದ್ದಾರೆ. 

Advertisement

ಮಂಗಳವಾರ ನಡೆದ ಚೆನ್ನೈ- ಕೋಲ್ಕತಾ ಐಪಿಎಲ್‌ ಪಂದ್ಯದ ವೇಳೆ ವಿನಯ್‌ ಕುಮಾರ್‌ ದುಬಾರಿಯಾಗಿದ್ದರು. ಅಂತಿಮ ಓವರ್‌ ಎಸೆದ ಅವರು 19 ರನ್‌ ನೀಡಿ ಚೆನ್ನೈ ಗೆಲ್ಲಲು ಕಾರಣವಾಗಿದ್ದರು. ಇದರಿಂದ ಅಭಿಮಾನಿಗಳು ವಿನಯ್‌ ಅವರನ್ನು ಟೀಕಿಸಿ ವ್ಯಂಗ್ಯ ಸಾಲುಗಳನ್ನು ಹರಿಬಿಟ್ಟಿದ್ದರು.

ಇದನ್ನು ಗಂಭೀರವಾಗಿಯೇ ಪರಿಗಣಿಸಿರುವ ವಿನಯ್‌ ಕುಮಾರ್‌, “ಇದು ಕೇವಲ ಒಂದು ಮಾತ್ರ ಅಭಿಮಾನಿಗಳೇ. ಆರಾಮಾಗಿರಿ. ಆರ್‌ಸಿಬಿ ವಿರುದ್ಧ 9 ರನ್‌ಗಳನ್ನು ಉಳಿಸಿ ಕೊಟ್ಟಿದ್ದಾಗ, ಮುಂಬೈ ಇಂಡಿಯನ್ಸ್‌ ವಿರುದ್ಧ 10 ರನ್‌ಗಳನ್ನು ನನ್ನ ಬೌಲಿಂಗ್‌ ಮೂಲಕವೇ ಉಳಿಸಿಕೊಟ್ಟಿದ್ದಾಗ ನೀವೆಲ್ಲ ಎಲ್ಲಿದ್ದಿರಿ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ವಿನಯ್‌ ಮಂಗಳವಾರ ತೀವ್ರ ವೈಫ‌ಲ್ಯ ಕಂಡಿದ್ದರು. 3.5 ಓವರ್‌ ಎಸೆದಿದ್ದ ಅವರು ಒಟ್ಟು 65 ರನ್‌ ಕೊಟ್ಟಿದ್ದರು. 4 ಓವರ್‌ನಲ್ಲಿ ಕ್ರಮವಾಗಿ 14, 16, 16, 19 ರನ್‌ ಬಿಟ್ಟುಕೊಟ್ಟಿದ್ದು ಕೆಕೆಆರ್‌ಗೆ ದುಬಾರಿಯಾಗಿ ಪರಿಣಮಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next