Advertisement

ಟ್ರೋಫಿ ಜತೆ ಈಡನ್‌ಗೆ ಮರಳಲು ಪ್ರಯತ್ನ: ಶಾರೂಖ್‌ ಖಾನ್‌

02:18 PM May 15, 2017 | Team Udayavani |

ಕೋಲ್ಕತಾ: ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕೋಲ್ಕತಾ ನೈಟ್‌ರೈಡರ್ಸ್ ತಂಡದ ಮಾಲಕ ಶಾರೂಖ್‌ ಖಾನ್‌ ಶನಿವಾರ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಕೆಕೆಆರ್‌ ತಂಡದ ಅಂತಿಮ ಲೀಗ್‌ ಪಂದ್ಯವನ್ನು ವೀಕ್ಷಿಸಲು ಬಂದಿದ್ದರು. ಆದರೆ ಮುಂಬೈ ವಿರುದ್ಧ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾದ ಕೆಕೆಆರ್‌ ತಂಡವು 9 ರನ್ನುಗಳಿಂದ ಸೋತಿತ್ತು. ಇದರಿಂದ ಶಾರೂಖ್‌ ನಿರಾಸೆ ಅನುಭವಿಸಿದರು.

Advertisement

ಪ್ರತಿಯೊಂದು ಪಂದ್ಯದಲ್ಲಿ ಪ್ರೇಕ್ಷಕರ ಬೆಂಬಲವನ್ನು ಗಮನಿಸಿದರೆ ನಾವು ಟ್ರೋಫಿ ಜತೆ ಮತ್ತೂಮ್ಮೆ ಈಡನ್‌ ಗಾರ್ಡನ್ಸ್‌ಗೆ ಆಗಮಿಸಿ ವಿಜಯೋತ್ಸವ ಆಚರಿಸಲು ಶಕ್ತಿಮೀರಿ ಪ್ರಯತ್ನಿಸಬೇಕಾಗಿದೆ ಎಂದು ಪಂದ್ಯದ ಬಳಿಕ ಶಾರೂಖ್‌ ತಿಳಿಸಿದರು. ಎರಡು ಬಾರಿಯ ಚಾಂಪಿಯನ್‌ ಕೆಕೆಆರ್‌ ಕಳೆದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತರೂ ಇದೀಗ ನಾಲ್ಕನೇ ತಂಡವಾಗಿ ಪ್ಲೇ ಆಫ್ಗೆ ತೇರ್ಗಡೆಯಾಗಿದೆ. ನಾವು ಕೆಲವೊಂದು ಪಂದ್ಯಗಳಲ್ಲಿ ತೀವ್ರ ಪೈಪೋಟಿ ನೀಡಿ ಸೋತಿದ್ದೇವೆ. ಗೆಲ್ಲುವುದು ಅಷ್ಟೊಂದು ಸುಲಭವಲ್ಲ. ಆದರೆ ಇನ್ನೀಗ ನಾವು ಸತತ ಮೂರು ಪಂದ್ಯಗಳಲ್ಲಿ ಗೆಲ್ಲಲೇಬೇಕಾಗಿದೆ (ಎಲಿಮಿನೇಟರ್‌, ಕ್ವಾಲಿಫೈಯರ್‌ 2 ಮತ್ತು ಫೈನಲ್‌) ಎಂದು ಶಾರೂಖ್‌ ಹೇಳಿದರು. ಕೆಕೆಆರ್‌ ತಂಡ ಮೇ 17ರಂದು ನಡೆಯುವ ಎಲಿಮಿನೇಟರ್‌ ಪಂದ್ಯವನ್ನಾಡಲು ಬೆಂಗಳೂರಿಗೆ ತೆರಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next