Advertisement

ಐಎನ್‌ಎಕ್ಸ್‌ ಮೀಡಿಯಾ ಕೇಸ್‌ : ಸಿಬಿಐ ಮುಂದೆ ಹಾಜರಾಗುವ ಕಾರ್ತಿ

12:07 PM Aug 23, 2017 | Team Udayavani |

ಹೊಸದಿಲ್ಲಿ : ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಂದು ಐಎನ್‌ಎಕ್ಸ್‌ ಮೀಡಿಯಾ ಕೇಸ್‌ ಗೆ ಸಂಬಂಧಿಸಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. 

Advertisement

ಕಳೆದ ಆಗಸ್ಟ್‌ 18ರಂದು ಸುಪ್ರೀಂ ಕೋರ್ಟ್‌, ಕಾರ್ತಿ ಚಿದಂಬರಂ ಗೆ ಇದೇ ಆಗಸ್ಟ್‌ 23ರಂದು ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.  

ಕೋರ್ಟ್‌ ಆದೇಶದ ಪ್ರಕಾರ ತಾನು ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಅಂದು ನ್ಯಾಯಾಲಯಕ್ಕೆ ಹೇಳಿದ್ದ ಕಾರ್ತಿ, “ಸಿಬಿಐ ಮುಂದೆ ಹಾಜರಾಗಲು ನನಗೇನೂ ಭಯವಿಲ್ಲ; ಆದರೆ ನನಗೆ ರಕ್ಷಣೆಯ ಅಗತ್ಯವಿದೆ’ ಎಂದು ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next