Advertisement

ಉಡುಪಿ ಪ್ರೌಢ ಶಾಲಾ ವಿಭಾಗ ನಾಟಕ ಸ್ಪರ್ಧೆಗೆ ಆಹ್ವಾನ; ಸೆ.17 ಕೊನೆಯ ದಿನ

04:09 PM Sep 15, 2022 | Team Udayavani |

ಉಡುಪಿ: ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಸಹಕಾರದಲ್ಲಿ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯನ್ನು ಸೆ.20ರಂದು ಮಲ್ಪೆ ಫಿಶರೀಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಆಸಕ್ತ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

Advertisement

ಕನಿಷ್ಠ 30 ನಿಮಿಷಗಳ ಗರಿಷ್ಠ 45 ನಿಮಿಷಗಳ ನಾಟಕವನ್ನು ಪ್ರದರ್ಶಿಸಬೇಕು. ಸಾಮಾಜಿಕ, ಶೈಕ್ಷಣಿಕ, ವಿಜ್ಞಾನ, ಪಠ್ಯ, ಸ್ವಾತಂತ್ರ‍್ಯ ಸಂಗ್ರಾಮ ಸಹಿತ ಯಾವುದೇ ವಿಷಯವನ್ನು ನಾಟಕಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಪ್ರಥಮ ಸ್ಥಾನ ಪಡೆದ ತಂಡವು ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದೆ.

ಭಾಗವಹಿಸುವ ವಿದ್ಯಾಸಂಸ್ಥೆಗಳ ತಂಡಗಳು ಸೆ.17ರ ಒಳಗೆ ದಿವಾಕರ ಕಟೀಲ್ (98440 61439) ಪ್ರವೀಣ್ ಕೊಡವೂರು (96114 96267), ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಪ್ರದೀಪ್ ಚಂದ್ರ ಕುತ್ಪಾಡಿ (94489 52847) ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಸಿಮೀತ ಅವಕಾಶಗಳಿರುವುದರಿಂದ ಮೊದಲು ನೊಂದಾಯಿತ ತಂಡಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next