Advertisement

ಆಪರೇಷನ್‌ ಆಡಿಯೋ ಸಮಗ್ರ ತನಿಖೆಯಾಗಲಿ :ಪೇಜಾವರ ಶ್ರೀ

01:07 AM Feb 15, 2019 | Team Udayavani |

ರಾಯಚೂರು: “ಸಮಗ್ರ ತನಿಖೆಯಿಂದ ಮಾತ್ರ ಆಪರೇಷನ್‌ ಕಮಲ ಆಡಿಯೋ ಪ್ರಕರಣದ ಸತ್ಯಾಂಶ ಬಯಲಾಗಲಿದೆ’ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಅಭಿಪ್ರಾಯಪಟ್ಟರು. ಗುರುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಆಡಿಯೋ ಪ್ರಕರಣದ ಸೂಕ್ತ ತನಿಖೆ ಆಗಬೇಕು. ಅದು ಮುಗಿಯುವವರೆಗೆ ನಾನು ಏನನ್ನೂ ಹೇಳುವುದಿಲ್ಲ.ಆದರೆ, ರಾಜ್ಯದಲ್ಲಿ ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ತುಂಬಾ ಬೇಸರ ಮೂಡಿಸಿವೆ. ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಇಂಥ ಸನ್ನಿವೇಶದಲ್ಲಿ ಸರ್ಕಾರ ಜನರ ಸಮಸ್ಯೆ ಅರಿತು ಕಾರ್ಯ ನಿರ್ವಹಿಸುವುದರ ಕಡೆ ಗಮನ ಹರಿಸ ಬೇಕು. ಆದರೆ, ರಾಜ ಕೀಯ ಪಕ್ಷಗಳು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next