Advertisement

ಬೊಮ್ಮೇನಹಳ್ಳಿಯಲ್ಲಿ ಲಾರಿಗಳಿಗೆ ತಡೆ-ಆಕ್ರೋಶ

04:42 PM Jun 02, 2022 | Team Udayavani |

ಭೀಮಸಮುದ್ರ: ಸಮೀಪದ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಲಾರಿಗಳನ್ನು ತಡೆಹಿಡಿಯಲಾಗಿದೆ ಎಂದು ಲಾರಿ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಲಾರಿಗಳು ನಿಂತಿರುವುದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸುಮಾರು 200 ಲಾರಿಗಳು ನಿಂತಿದ್ದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಚಿತ್ರದುರ್ಗದ ಲಾರಿ ಚಾಲಕ ನಾಗರಾಜ್‌ ಮಾತನಾಡಿ, ಕಳೆದ ಐದು ದಿನಗಳಿಂದ ಲಾರಿ ನಿಲ್ಲಿಸಿದ್ದಾರೆ. ಮೊದಲನೇ ದಿನ ಹಿರೇಗುಂಟನೂರು ಬಳಿ ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ ಎಂದು ಗ್ರಾಮಸ್ಥರು ಲಾರಿಗಳಿಗೆ ತಡೆಯೊಡ್ಡಿದ್ದರು. ನಾವು ಮನೆಗೆ ಹೋಗದೆ ಸುಮಾರು ಐದು ದಿನಗಳಾಗಿವೆ ಎಂದು ಅಳಲು ತೋಡಿಕೊಂಡರು.

ಗ್ರಾಪಂ ಮಾಜಿ ಅಧ್ಯಕ್ಷ ಟಿ.ಜಿ. ಅರುಣಕುಮಾರ್‌ ಮಾತನಾಡಿ, ಮೇ 27ರಂದು ಮಧ್ಯಾಹ್ನ 3 ಗಂಟೆಗೆ ಲಾರಿಗಳನ್ನು ತಡೆಹಿಡಿದು ನಿಲ್ಲಿಸಿದ್ದಾರೆ. ಮೇ 30ರಂದು ಪಿಎಸ್‌ಐ, ಎಸ್ಪಿ ಹಾಗೂ ಜಿಲ್ಲಾಧಿಕಾರಿಯವರಿಗೂ ದೂರು ನೀಡಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಲಾರಿಗಳನ್ನು ತಡೆ ಹಿಡಿದಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ, ಲಾರಿ ಮಾಲೀಕರು ಹಾಗೂ ಚಾಲಕರಿಗೆ ತುಂಬಾ ನಷ್ಟವಾಗಿದೆ. ಬೊಮ್ಮೇನಹಳ್ಳಿ ಗ್ರಾಮದ ಸಿದ್ದೇಶ್‌, ವೆಂಕಟೇಶ್‌, ಮಂಜುನಾಥ್‌, ಸಾವಕಾರ್‌ ಬಾಬು, ಪರಮೇಶ್‌, ರಾಮಣ್ಣ ಲಾರಿಗಳನ್ನು ತಡೆದಿದ್ದಾರೆ. ಆದರೂ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next